ಹನೂರು: ಅತ್ಯಂತ ಕ್ರಿಯಾಶೀಲ ಪ್ರಧಾನಮಂತ್ರಿಗಳಲ್ಲೊಬ್ಬರಾದ ನರೇಂದ್ರ ಮೋದಿ ಯವರ ಹುಟ್ಟುಹಬ್ಬವನ್ನು ಹನೂರು ವಿಧಾನ ಸಭಾ ಕ್ಷೇತ್ರದ ದೊಡ್ಡಿಂದುವಾಡಿ ಗ್ರಾಮದಲ್ಲಿ ಗಿಡ ನೆಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವುದರ ಮೂಲಕ ಆಚರಿಸಲಾಯಿತು
ನಂತರ ಮಾತನಾಡಿದ ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದತ್ತೆಶ್ ಕುಮಾರ್ ಮೋದಿಯವರ ಹುಟ್ಟುಹಬ್ಬ ಪ್ರತಿ ಬಾರಿಯು ವಿಭಿನ್ನವಾಗಿ ಆಚರಿಸುತ್ತಿದ್ದು, ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ೭೦ ನೇ ಹುಟ್ಟುಹಬ್ಬವನ್ನು ದೊಡ್ಡಿಂದೂವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಮತ್ತು ಆವರಣದಲ್ಲಿ ಗಿಡ ನೆಡುವುದರ ಮೂಲಕ ಸರಳವಾಗಿ ಆಚರಿಸಲಾಯಿತು ಎಂದರು.
ಜಿಲ್ಲಾ ಯುವಮೋರ್ಚ ಉಪಾಧ್ಯಕ್ಷರಾದ ವೃ಼ಷಭೇಂದ್ರ .ತೆಳ್ಳನೂರು ಪುಟ್ಟಮಾದಯ್ಯ, ಇನ್ನಿತರರು ಹಾಜರಿದ್ದರು