ಕೊಪ್ಪಳ, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಮೋದಿ ಬಂದ್ರೇನು ಡಬ್ಬಿಯಲ್ಲಿ ವೋಟ್ ಬೀಳ್ತಾವಾ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು. ಕೊಪ್ಪಳದಲ್ಲಿ ಮಾತನಾಡಿದ ತಂಗಡಗಿ ನಾಳೆ ಗಂಗಾವತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಬರುತ್ತಿದ್ದಾರೆ. ಮೋದಿ ಬಂದರೆ ಎಲ್ಲವೂ ಡಬ್ಬಿಯಲ್ಲಿ ವೋಟ್ ಬಿದ್ದುಬಿದುತ್ತಾವಾ ಎಂದ ತಂಗಡಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಮೋದಿ ಬಂದು ಭಾಷಣ ಮಾಡಿ ಹೋದ ನಂತ್ರ ಬಾಷಣದ ಬಗ್ಗೆ ಜನರಿಗೆ ಮನವರಿಕೆ ಮಾಡಿ ತಿಳುಸತ್ತೇವೆ.
ಕಳೆದ ಸಲ ಮೋದಿ ಕೊಪ್ಪಳಕ್ಕೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ. ಕಳೆದ ಬಾರಿ ಎಷ್ಟ ಸುಳ್ಳ ಹೇಳಬೇಕಾಗಿತ್ತು, ಎಲ್ಲಾ ಸುಳ್ಳ ಹೇಳಿ ಹೋಗಿದ್ದಾರೆ.
15 ಲಕ್ಷ ಹಾಕುತ್ತಿನಿ ಅಂದರು, ಉದ್ಯೋಗ ಕೊಡಿಸುತ್ತೇನೆ ಅಂದರು, ಅದು ಎಲ್ಲವೂ ಸುಳ್ಳು ಭರವಸೆಯಾಗಿದೆ.
ನಾಳೆ ಮತ್ತೆ ಗಂಗಾವತಿಗೆ ಸುಳ್ಳು ಹೇಳಲು ಬರುತ್ತಿದ್ದಾರೆ.
ಆ ವಿಷಯದಲ್ಲಿ ನಾವು ಜನರಿಗೆ ಏನು ಮುಟ್ಟಿಸಬೇಕೋ, ಅದನ್ನ ಮುಟ್ಟಿಸುತ್ತೇವೆಂದ ತಂಗಡಗಿ ಹೇಳಿದರು.