ದೇಶ ಸುರಕ್ಷಿತ ಕೈಗಳಲ್ಲಿದೆ: ಮೋದಿ

ದೇಶ ಸುರಕ್ಷಿತ ಕೈಗಳಲ್ಲಿದೆ: ಮೋದಿ

ಜೈಪುರ, ನ್ಯೂಸ್‍
ಎಕ್ಸ್‍ ಪ್ರೆಸ್‍, ಫೆ
.26:  ಭಾರತ ಈಗ
ಸುರಕ್ಷಿತ ಕೈಗಳಲ್ಲಿದೆ ಎಂದು ಪ್ರಧಾನ ಮಂತ್ರಿ
ನರೇಂದ್ರ ಮೋದಿ ಹೇಳಿದ್ದಾರೆ.

ಪುಲ್ವಾಮ
ದಾಳಿಯ ನಂತರ ಇಂದು ಮುಂಜಾನೆ
ಪಾಕ್ ಆಕ್ರಮಿತ ಪ್ರದೇಶದ ಜೆಇಎಂ
ಸಂಘಟನೆಯ ಅಡಗುದಾಣಗಳ ಮೇಲೆ ವಾಯು ದಾಳಿ
ನಡೆಸಿದ ಬಗ್ಗೆ ರಾಜಸ್ತಾನದ ಚುರುವಿನಲ್ಲಿ
ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ
ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಯಶಸ್ವಿಯಾಗಿ
ವೈಮಾನಿಕ ದಾಳಿ ನಡೆಸುವ ಮೂಲಕ
ಪರಾಕ್ರಮ ಯೋಧರಿಗೆ ನಮನ ಸಲ್ಲಿಸಬೇಕು.
ಬೇರೆಯವರ ಮುಂದೆ ದೇಶವನ್ನು ತಲೆತಗ್ಗಿಸಲು
ಬಿಡುವುದಿಲ್ಲ. ಈ ಮೂಲಕ ಭಾರತ
ಮಾತೆಗೆ ವಚನ ನೀಡುತ್ತೇನೆ ಎಂದರು.

ಪುಲ್ವಾಮ
ದಾಳಿಯ ಸಂದರ್ಭದಲ್ಲಿ ತಾವು ನೀಡಿದ ವಚನವನ್ನು
ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಅಡಗಿ
ಕುಳಿತ್ತಿದ್ದ ಜೆ.ಇ.ಎಂ.
ಉಗ್ರಗಾಮಿ ಸಂಘಟನೆಯ ಅಡಗುದಾಣಗಳ ಮೇಲೆ
ದಾಳಿ ನಡೆಸುವ ಮೂಲಕ ಕೊಟ್ಟ
ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos