ಶಾಸಕ ಶಿವನಗೌಡ ವಿರುದ್ಧ ವಾಗ್ದಾಳಿ

ಶಾಸಕ ಶಿವನಗೌಡ ವಿರುದ್ಧ ವಾಗ್ದಾಳಿ

ರಾಯಚೂರು, ನ. 2 : ದೇವದುರ್ಗ ಶಾಸಕ ಶಿವನಗೌಡ ನಾಯಕರ ವಿರುದ್ದ ಕಾಂಗ್ರೆಸ್ ಮುಖಂಡ ರಾಜಶೇಖರ ನಾಯಕ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ, ಆರ್ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜಶೇಖರ ನಾಯಕರಿಂದ ವಾಕ್ಸಮರ. ದೇವದುರ್ಗದ ಶಾಸಕ ಶಿವನಗೌಡ ನಾಯಕ ಮಟ್ಕಾಬುಕ್ಕಿ, ಮದ್ಯದ ದೊರೆ, ಗುತ್ತಿಗೆದಾರರಿಂದ ಕಮೀಷನ್ ಕೀಳುವ ವ್ಯಕ್ತಿ. ಕೇವಲ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡುವ ಶಾಸಕ.ಅಕ್ರಮ ಮದ್ಯ ಮಾರಾಟ, ಇಸ್ಪೇಟ್ ಆಟಕ್ಕೆ, ಮಟ್ಕಾಕ್ಕೆ ಸಹಕಾರ ನೀಡುತ್ತಿರುವುದೇ ಸಾಧನೆ. ಕ್ಷೇತ್ರದಲ್ಲಿ ತಮ್ಮವಿರುದ್ಧ ನಡೆಯುವ ಹೋರಾಟ ಹತ್ತಿಕ್ಕುವ ಪ್ರಯತ್ನ. ಈಚೆಗೆ ದೇವದುರ್ಗ ತಾಲೂಕಿನ ಮುಷ್ಟೂರನಿಂದ ಅರಕೇರಿಗೆ ಪಾದಯಾತ್ರೆ ನಡೆಸಿದ ಸಂದರ್ಭ ದಲ್ಲಿ ರೈತರು ಹಾಗು ಕಾಂಗ್ರೆಸ್ ಮುಖಂಡರನ್ನು ಶಾಸಕ ಶಿವನ ಗೌಡ ಅಧಿಕಾರ ಬಳಸಿ ಪೊಲೀಸರ ಮೂಲಕ ಬಂಧಿಸುವಂತೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos