‘ಸೀತಾರಾಮ ಕಲ್ಯಾಣ’ ಚಿತ್ರದ ಪ್ರೀಮಿಯರ್ ಶೋ ವೇಳೆ ಎಂಎಲ್ಎ-ಡಿಸಿಪಿ ನಡುವೆ ವಾಗ್ವಾದ..!

‘ಸೀತಾರಾಮ ಕಲ್ಯಾಣ’ ಚಿತ್ರದ ಪ್ರೀಮಿಯರ್ ಶೋ ವೇಳೆ ಎಂಎಲ್ಎ-ಡಿಸಿಪಿ ನಡುವೆ ವಾಗ್ವಾದ..!

ಬೆಂಗಳೂರು: ನಿಖಿಲ್​ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಪ್ರೀಮಿಯರ್ ಶೋ ನಂತರ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ.

ಗುರುವಾರ ಓರಾಯನ್ ಮಾಲ್​ನಲ್ಲಿ ನಿನ್ನೆ ‘ಸೀತಾರಾಮ ಕಲ್ಯಾಣ’ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಶೋ ಮುಗಿದ ನಂತರ ಓರಾಯನ್ ಮಾಲ್ ಹಿಂಭಾಗದಲ್ಲಿರುವ ‘ವರ್ಲ್ಡ್​ ಟ್ರೇಡ್ ಸೆಂಟರ್​’ನಲ್ಲಿ ಅತಿಥಿಗಳಿಗಾಗಿ ಡಿನ್ನರ್ ಪಾರ್ಟಿ ಕೂಡಾ ಆಯೋಜನೆ ಮಾಡಲಾಗಿತ್ತು.

ಇದೇ ವೇಳೆ ಡಿಸಿಪಿ ದೇವರಾಜ್​ ಡಿನ್ನರ್‍ಗೆ ಆಗಮಿಸಿದ್ದ ಗಣ್ಯರ ಭದ್ರತೆಯನ್ನು ನೋಡಿಕೊಂಡಿದ್ದಾರೆ.

ಇನ್ನು ಡಿನ್ನರ್‍
ಮುಗಿದ ನಂತರ ನಾಗಮಂಗಲ ಶಾಸಕ ಸುರೇಶ್ ಗೌಡ ಮತ್ತು ದೇವರಾಜ್ ಒಂದೇ ಲಿಫ್ಟ್​ನಲ್ಲಿ ಜೊತೆಯಾಗಿ ಕೆಳಗೆ ಬರುತ್ತಿದ್ದರಂತೆ. ಈ ವೇಳೆ ಈ ವೇಳೆ ಲಿಫ್ಟ್​ನಲ್ಲಿ ಡಿಸಿಪಿ ದೇವರಾಜ್​ರನ್ನ ಶಾಸಕ ಸುರೇಶ್ ಗೌಡ ನೋಡುತ್ತಿದ್ದರಂತೆ.ಇದಕ್ಕೆ ಡಿಸಿಪಿ ದೇವರಾಜ್​, ”ಏನ್ರಿ ನನ್ನನ್ನ ಹಾಗ್ ನೋಡ್ತಿದ್ದಿರಾ..?” ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡರನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸುರೇಶ್​ ಗೌಡ, ”ನಾನ್ಯಾಕಯ್ಯ ನಿನ್ ನೋಡ್ಲಿ, ನೀ ಯಾರಿಗೇಳ್ತಿಯಾ ಅಂತಾ ನಂಗೊತ್ತು..?” ಅಂತಾ ಡಿಸಿಪಿ ದೇವರಾಜ್​ಗೆ ಹೇಳಿದ್ದಾಂರೆ.

ಅದಕ್ಕೆ ಡಿಸಿಪಿ ದೇವರಾಜ್ ನನ್ನ ಹತ್ತಿರ ಗುರಾಯಿಸೋದೆಲ್ಲ ಇಟ್ಕೊಳ್ ​ಬೇಡ, ಸರಿ ಇರಲ್ಲ” ಅಂತಾ ಸುರೇಶ್ ಗೌಡರಿಗೆ ಲಿಫ್ಟ್​ನಲ್ಲೇ ವಾರ್ನ್ ಮಾಡಿದ್ದಾರಂತೆ. ಇನ್ನು ಇದರಿಂದ ಸಿಟ್ಟಾದ ಶಾಸಕ ಸುರೇಶ್ ಗೌಡ ಕೂಡಲೇ ಸಿಎಂಗೆ ವಿಷಯ ತಿಳಿಸಿದ್ದಾರೆ. ಸಿಎಂ ಇಬ್ಬರನ್ನು ಕರೆದು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸಿಎಂ ಕೇಳಿದ ಪ್ರಶ್ನೆಗಳಿಗೆ ಡಿಸಿಪಿ ದೇವರಾಜ್ ಉತ್ತರಿಸಿದೇ ಸುಮ್ಮನೆ ಆಗಿದ್ದಾರಂತೆ. ಇನ್ನು ಈ ಬಗ್ಗೆ ನಾಳೆ ಮಾತನಾಡುವೆ ಸದ್ಯಕ್ಕೆ ಇಲ್ಲಿಗೆ ಬಿಡಿ ಅಂತ ಶಾಸಕ ಸುರೇಶ್ ಗೌಡ ಅವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos