ಸಚಿವರೆದುರೇ ಶಾಸಕ ಕಣ್ಣೀರು..!

ಸಚಿವರೆದುರೇ ಶಾಸಕ ಕಣ್ಣೀರು..!

ಕುಣಿಗಲ್, ನ. 7 : ರಸ್ತೆ ಅಭಿವೃದ್ಧಿಗೆ ಮಂಜೂರಾಗಿದ್ದ 14 ಕೋಟಿ ರೂ.ಗಳನ್ನು ಸರ್ಕಾರ ತಡೆಹಿಡಿದಿದ್ದು, ಬಿಡುಗಡೆ ಮಾಡಿಕೊಡಬೇಕೆಂದು ಶಾಸಕ ಡಾ.ರಂಗನಾಥ್ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎದುರು ಕಣ್ಣೀರಿಟ್ಟು ಕೈ ಮುಗಿದ ಪ್ರಸಂಗಕ್ಕೆ ಕೆಡಿಪಿ ಸಭೆ ಸಾಕ್ಷಿಯಾಯಿತು.
ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಶಾಸಕರು ಕಣ್ಣೀರಿಟ್ಟ ತಕ್ಷಣ ಇಡೀ ಸಭೆ ಕೆಲಕಾಲ ಮೌನಕ್ಕೆ ಜಾರಿತು. ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ಕಟ್ಟಿಕೊಡಲು 700 ಕೋಟಿ ರೂಪಾಯಿ ಹೊಂದಿಸಬೇಕಾಗಿದೆ, ಇದಕ್ಕಾಗಿ ಕೆಲವು ಯೋಜನೆಗಳ ಅನುದಾನ ಹಿಂಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಕೊಡಿಸುವೆ ಎಂದು ಸಚಿವರು ಶಾಸಕರನ್ನು ಸಮಾಧಾನಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos