ಫರೀದ್ ಪುರ್, ಜೂ. 26 : ಇಲ್ಲಿನ ಎನ್ಎಚ್ 24 ರಲ್ಲಿ ಬುಧವಾರ ನಡೆದ ಭೀಕರ ಅಪಘಾತದಲ್ಲಿ ಉತ್ತಾರಖಂಡದ ಸಚಿವರ ಪುತ್ರ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಸುಕಿನ 3 ಗಂಟೆಯ ವೇಳೆಗೆ ಕಾರು ಟ್ರಕ್ಗೆ ಗುದ್ದಿ ನಜ್ಜುಗುಜ್ಜಾಗಿದೆ. ಸಚಿವ ಅರವಿಂದ್ ಪಾಂಡೆ ಅವರ ಪುತ್ರ ಅಂಕುರ್ ಮತ್ತು ಕಾರಿನಲ್ಲಿದ್ದಇಬ್ಬರು ಸ್ನೇಹಿತರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗೋರಖ್ಪುರಕ್ಕೆ ಸ್ನೇಹಿತನ ವಿವಾಹ ಸಮಾರಂಭಕ್ಕೆಂದು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.