ರಾಮನಗರ, ಅ. 29 : ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳ ಜ್ಞಾನಮಟ್ಟ ಪರೀಕ್ಷೆ ಮಾಡೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇತ್ತ ಗಮನಹರಿಸಿದರೆ ಒಳಿತು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇಂತಹ ಶಾಲೆಗಳಿಗೆ ಭೇಟಿ ಕೊಟ್ಟರೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ಆಗೋದು ನಿಶ್ಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಳೆಯಿಂದಾಗಿ
ಸೋರುತ್ತಿರುವ ಶಾಲೆಯ ಕಟ್ಟಡ, ಮತ್ತೊಂದೆಡೆ ಮಕ್ಕಳ ವಿದ್ಯಾಭ್ಯಾಸ ಆತಂಕದಲ್ಲೇ ನಡೆಯುತ್ತಿದೆ. ಇದರ ಮಧ್ಯೆ ಪಾತ್ರೆಯಲ್ಲಿ ತುಂಬುವ ನೀರನ್ನು ಹೊರ ಚೆಲ್ಲುವ ಕೆಲಸ ಬೇರೆ. ಪಾಠದ ಕಡೆ ಗಮನ ಕೊಡಬೇಕೊ ಇಲ್ಲ ನೀರು ತುಂಬಿರುವ ಪಾತ್ರೆಗಳ ಬಗ್ಗೆ ಗಮನ ಕೊಡಬೇಕೋ ಅನ್ನೋ ಸಂದಿಗ್ಧತೆ ಉಂಟಾಗಿರುವ ಘಟನೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ ತಾಲೂಕಿನ ಶ್ಯಾನಭೋಗನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದೃಶ್ಯ ಕಂಡು ಬಂದಿದೆ.