ಹನೂರು: ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಮಲೈ ಮಹದೇಶ್ವರ ಬೆಟ್ಟಕ್ಕೆ ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಭೇಟಿ ನೀಡಿದ ವೇಳೆ ವಿಶೇಷ ಪೂಜೆ ಸಲ್ಲಿಸಿದರು. ಸ್ಥಳೀಯ ಶಾಸಕ ನರೇಂದ್ರ ಸಹಕರಿಸಿದರು
ನಂತರ ಮಾತನಾಡಿದ ಶಾಸಕ ನರೇಂದ ಹನೂರು ಕ್ಷೇತ್ರವು ಬೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿದ್ದು ನೂತನವಾಗಿ ತಾಲ್ಲೂಕು ಘೋಷಣೆ ಮಾಡಲಾಗಿದೆ ಆದರೆ ಟಿಎಪಿಸಿಎಮ್ಎಸ್, ಎಪಿಎಮ್ಸಿ, ಮತ್ತು ಆರ್ಎಂಸಿ ಗಳು ಕೋಳ್ಳೆಗಾಲದಿಂದ ವಿಭಜನೆಯಾಗದೆ ಹಾಗೆ ಉಳಿದಿದೆ ಅದ್ದರಿಂದ ಅದಕ್ಕೆ ಸಂಬಂಧಿಸಿದ ಎಲ್ಲಾ ಸಹಕಾರ ನೀಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ನೂತನ ತಾಲ್ಲೊಕಿಗೆ ಸಂಭವಿಸಿದ ಎಲ್ಲಾ ಕೆಲಸ ಕಾಮಗಾರಿಗಳಿಗೂ ಸಂಭಂದಪಟ್ಟ
ಅಧಿಕಾರಿಗಳ ಜೋತೆ ಸಮಲೊಚಿಸಿ ತಿರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು. ದೇವಾಲಯದ ಕಾರ್ಯದರ್ಶಿ ಜಯವಿಭವಸ್ವಾಮಿ ಉಪ ಕಾರ್ಯದರ್ಶಿ ಬಸವರಾಜು, ಅಬಿಯಂತರರು ಮನುವಚಾರ್ಯರು ಭಾಗವಹಿಸಿದರು