‘ಸಚಿವ ಸ್ಥಾನ’ ತ್ಯಾಗಕ್ಕೆ ಅರುಣ್ ಜೆಟ್ಲಿ ಸಿದ್ಧ!

‘ಸಚಿವ ಸ್ಥಾನ’ ತ್ಯಾಗಕ್ಕೆ ಅರುಣ್ ಜೆಟ್ಲಿ ಸಿದ್ಧ!

ನವದೆಹಲಿಮೇ. 29, ನ್ಯೂಸ್‍ ಎಕ್ಸ್ ಪ್ರೆಸ್: ಮೋದಿ ಪ್ರಮಾಣ ವಚನಕ್ಕೂ ಮುನ್ನ  ಅರುಣ್ ಜೆಟ್ಲಿ ಅವರು ‘ಸಚಿವ ಸ್ಥಾನ’ ತ್ಯಾಗಕ್ಕೆ ಸಿದ್ಧರಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.  ನಾಳೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.  ‘ನನ್ನ ಆರೋಗ್ಯದ ಕಡೆ ಗಮನ ಕೊಡಲು ಸಮಯ ಬೇಕು. ಪಕ್ಷ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಇತರೆ ಯಾವುದೇ ಅನೌಪಚಾರಿಕೆ ಕೆಲಸಗಳನ್ನ ನಿರ್ವಹಿಸಲು ನಾನು ಸಿದ್ಧನಿರುತ್ತೇನೆ’ ಎಂದು ಅರುಣ್​ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ  ಪತ್ರದಲ್ಲಿ ಹೇಳಿದ್ದಾರೆ.

18 ತಿಂಗಳಿನಿಂದ ನನ್ನ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಎದುರಾಗಿವೆ. ಪ್ರಚಾರದ ವೇಳೆ ನನಗೆ ನೀಡಿದ್ದ ಜವಾಬ್ದಾರಿಗಳನ್ನ ನಿಭಾಯಿಸಿದ್ದೇನಾದ್ರೂ, ಮುಂದೆ ನನಗೆ ಯಾವುದೇ ಜವಾಬ್ದಾರಿ ನೀಡದಂತೆ ನೀವು ಕೇದರನಾಥಕ್ಕೆ ಹೋಗುವಾಗಲೇ ನಾನು ಮೌಖಿಕವಾಗಿ ಹೇಳಿದ್ದೆ. ಇದರಿಂದ ನನ್ನ ಆರೋಗ್ಯ ಹಾಗೂ ಚಿಕಿತ್ಸೆ ಮೇಲೆ ಗಮನಹರಿಸಲು ನೆರವಾಗುತ್ತದೆ.  ಎನ್​ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅರುಣ್​ ಜೇಟ್ಲಿ, ನೂತನ ಸರ್ಕಾರದಲ್ಲಿ ತನಗೆ ಯಾವುದೇ ಮಹತ್ವದ ಜವಾಬ್ದಾರಿಗಳನ್ನು ನೀಡದಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos