ಹರಪನಹಳ್ಳಿ : ತಾಲೂಕಿನಲ್ಲಿ ನೀರಗಂಟಿ ಹಾಗೂ ಪಿಡಿಒ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಲಕ್ಷಾಂತರ ಹಣ ಪೋಲಾಗುತ್ತದೆ ಎಂದು ತಾ.ಪಂ ಉಪಾದ್ಯಕ್ಷ ಮಂಜ್ಯಾನಾಯ್ಕ ಅವರು ಅಸಮಾದಾನ ವ್ಯಕ್ತಪಡಿಸಿದರು.
ಪಟ್ಟಣದ ತಾ.ಪಂ ರಾಜೀವಗಾಂಧಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ,ತಾಲೂಕು ಪಂಚಾಯ್ತಿಯಲ್ಲಿ ಲಕ್ಷಾಂತರ ಹಣ ಪೋಲಾಗುತ್ತದೆ, ನೀರಗಂಟಿ ಹಾಗೂ ಪಿಡಿಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯೂರಿಯಾ ಕೊರತೆಯಾಗದಂತೆ ನೋಡಿಕೊಳ್ಳಿ, ಅದರಲ್ಲೂ ಸಮಯಕ್ಕೆ ಸರಿಯಾಗಿ ಗೊಬ್ಬರ ಸಿಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೊಂದಿ ಅವರಿಗೆ ಸೂಚಿಸಿದರು.