ಮೇಕೆದಾಟು: ತಮಿಳುನಾಡು ನಡೆ ಖಂಡಿಸಿ ಜ.12ರಂದು ಅತ್ತಿಬೆಲೆ ಬಂದ್‍

ಮೇಕೆದಾಟು: ತಮಿಳುನಾಡು ನಡೆ ಖಂಡಿಸಿ ಜ.12ರಂದು ಅತ್ತಿಬೆಲೆ ಬಂದ್‍

ಕನ್ನಡ ಚಳವಳಿ ವಾಟಳ್‍ ಪಕ್ಷದ ವಾಟಾಳ್ ನಾಗರಾಜ್ ಹೇಳಿಕೆ

ಬೆಂಗಳೂರು: ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಜನವರಿ 12ರಂದು ಅತ್ತಿಬೆಲೆ ಗಡಿ ಬಂದ್ ಮಾಡಿ ಪ್ರತಿಭಟಿಸಲಾಗುವುದೆಂದು ಕನ್ನಡ ಚಳವಳಿ ವಾಟಳ್‍ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ತಮಿಳುನಾಡು ವಿರೋಧಿಸಿ, ಕರ್ನಾಟಕ ಗಡಿ ಬಂದ್ ಮಾಡಿರುವುದಲ್ಲಿ ಯಾವುದೇ ಅರ್ಥವಿಲ್ಲ. ಮೇಕೆದಾಟು ಯೋಜನೆಗೆ ಆರಂಭದಲ್ಲಿ ಯಾರು ತಡೆಯೊಡ್ಡಿಲ್ಲ. ಹಾಗಾಗಿ ಈ ಕುರಿತು ಕರ್ನಾಟಕ ಸರ್ಕಾರ ಕೂಡಲೇ ನೀಲಿನಕ್ಷೆ ತಯಾರಿಸಬೇಕು ಎಂದರು.

ಅಷ್ಟೇ ಅಲ್ಲದೇ ಕೂಡಲೇ ಮೇಕೆದಾಟು ಯೋಜನೆ ಆರಂಭಿಸುವಂತೆ ಒತ್ತಾಯಿಸಿ ಜ.12ರಂದು ಬೆಳಗ್ಗೆ  ಅತ್ತಿಬೆಲೆ ಬಂದ್ ಮಾಡುವ ಮೂಲಕ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಾ.ರಾ.ಗೋವಿಂದ್ ಸೇರಿದಂತೆ ಹಲವು ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos