‘ತತ್ಸಮ ತದ್ಭವ’ ಚಿತ್ರದ ಪ್ರಚಾರದಲ್ಲಿ ಮೇಘನಾ ರಾಜ್

‘ತತ್ಸಮ ತದ್ಭವ’ ಚಿತ್ರದ ಪ್ರಚಾರದಲ್ಲಿ ಮೇಘನಾ ರಾಜ್

ಬೆಂಗಳೂರು: ನಮ್ಮ ಸ್ಯಾಂಡಲ್ವುಡ್ ನಲ್ಲಿ ಇತ್ತೀಚಿಗೆ ಹಲವಾರು ಕಥೆ ಆಧಾರಿತ ಸಿನಿಮಾಗಳು ಬರುತ್ತಾ ಇದೆ. ಕನ್ನಡ ಸಿನಿಮಾ ವೆಂದರೆ ಪರ ಭಾಷೆಯಲ್ಲಿಯೂ ಸಹ ಕನ್ನಡ ಸಿನಿಮಾಗಾಗಿ ಅನೇಕ ಅಭಿಮಾನಿಗಳು ಕಾಯುತ್ತಿರುತ್ತಾರೆ. ಏಕೆಂದರೆ ಇತ್ತೀಚಿನ ಕನ್ನಡ ಸಿನಿಮಾಗಳು ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಅದರಿಂದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಅತ್ಯಂತ ಉತ್ತುಂಗಕ್ಕೆ ಬೆಳೆದಿದೆ
ನಟಿ ಮೇಘನಾ ರಾಜ್ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ಅವರ ನಟನೆಯ ‘ತತ್ಸಮ ತದ್ಭವ’ ಚಿತ್ರ ಸೆಪ್ಟೆಂಬರ್ 15ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕಾಗಿ ಮೇಘನಾ ರಾಜ್ ಅವರು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಗೆಲ್ಲುವ ಭರವಸೆಯಲ್ಲಿ ಅವರಿದ್ದಾರೆ. ಈ ಸಿನಿಮಾ ಸಖತ್ ಸಸ್ಪೆನ್ಸಿಂಗ್ ಆಗಿರಲಿದೆ ಎನ್ನುವುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ.
2020ರಲ್ಲಿ ಚಿರಂಜೀವಿ ಸರ್ಜಾ ಮೃತಪಟ್ಟರು. ಪತಿಯನ್ನು ಕಳೆದುಕೊಂಡ ಬಳಿಕ ಮೇಘನಾ ರಾಜ್ ಸಾಕಷ್ಟು ಕುಗ್ಗಿದ್ದರು. ಮಗ ಜನಿಸಿದ ಬಳಿಕ ಅವರು ಸ್ವಲ್ಪ ಚೇತರಿಸಿಕೊಂಡರು. ಈಗ ಮಗನ ಆರೈಕೆಯ ಜೊತೆಗೆ ಚಿತ್ರರಂಗದಲ್ಲು ಬ್ಯುಸಿ ಇದ್ದಾರೆ.
ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ‘ನನ್ನ ಪತಿ ಕಾಣೆ ಆಗಿದ್ದಾನೆ’ ಎಂದು ಟ್ರೇರಲ್ನಲ್ಲಿ ಮೇಘನಾ ರಾಜ್ ಹೇಳುವ ಸಾಲುಗಳು ಗಮನ ಸೆಳೆದಿದೆ. ಈ ಚಿತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೂಡ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ.
ವಿಶಾಲ್ ಆತ್ರೇಯ ಅವರ ನಿರ್ದೇಶನದಲ್ಲಿ ‘ತತ್ಸಮ ತದ್ಭವ’ ಚಿತ್ರ ಮೂಡಿಬಂದಿದೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಹಾಡುಗಳು ಗಮನ ಸೆಳೆಯುತ್ತಿವೆ. ದೊಡ್ಡ ತಾರಾ ಬಳಗ ಚಿತ್ರದಲ್ಲಿದೆ. ಸದ್ಯ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಇವುಗಳ ಜೊತೆ ‘ತತ್ಸಮ ತದ್ಭವ’ ಸ್ಪರ್ಧಿಸಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos