ಮೇಘಾಲಯ: ಗಣಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

ಶಿಲ್ಲಾಂಗ್:
 ಮೇಘಾಲಯದ ಗಣಿಯೊಂದರಲ್ಲಿ 15 ಕಾರ್ಮಿಕರು
ಸಿಲುಕಿಕೊಂಡಿದ್ದರು. ಈ ಪ್ರಕರಣದಲ್ಲಿ ಕಾರ್ಯಾಚರಣೆಯ ಫಲವಾಗಿ ಕೊನೆಗೂ ಓರ್ವ ಕಾರ್ಮಿಕನ ಮೃತದೇಹ
ಪತ್ತೆಯಾಗಿದೆ.

ಕಳೆದ
ಒಂದುತಿಂಗಳಿನಿಂದ ಶೋಧ ಕಾರ್ಯ ನಡೆಯುತ್ತಿತ್ತು. ಆದರೆ ಇದುವರೆಗೂ ಕಾರ್ಮಿಕರು ಜೀವಂತವಾಗಿಯೂ ಪತ್ತೆಯಾಗಿರಲಿಲ್ಲ,
ಶವವೂ ಪತ್ತೆಯಾಗಿರಲಿಲ್ಲ. ರಕ್ಷಣಾ ಕಾರ್ಯವೇ ಸರಿಯಾಗಿ ನಡೆಯುತ್ತಿಲ್ಲ, ಎಂದು ಸುಪ್ರೀಂ ಕೋರ್ಟ್
ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಛಿಮಾರಿ ಹಾಕಿತ್ತು. ಆದರೆ ಇದೀಗ ಓರ್ವ ಕಾರ್ಮಿಕನ ಶವ
ಪತ್ತೆಯಾಗಿದ್ದು, ಉಳಿದ ಕಾರ್ಮಿಕರ ಶವವೂ ಹತ್ತಿರದಲ್ಲೇ ಸಿಕ್ಕಬಹುದು ಎಂದು ಅಂದಾಜಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos