ಬೆಂಗಳೂರು, ಅ. 1 : ಬಿಜೆಪಿ ಪಾಲಿಗೆ ಇಂದು ಶುಭ ಮಂಗಳ ವಾರವಾಗಿದ್ದು, ಬಿಬಿಎಂಪಿ ಮೇಯರ್ ಪಟ್ಟ ಬಿಜೆಪಿಗೆ ಬಂದಿದೆ. ಬಿಬಿಎಂಪಿ ಮಹಾಪೌರರಾಗಿ ಗೌತಮ್ ಕುಮಾರ್ ಮಾರ್ವಾಡಿ ಆಯ್ಕೆ ಖಂಡಿಸಿ ಬಿಬಿಎಂಪಿ ಆವರಣದಲ್ಲಿ ಕನ್ನಡ ಹೋರಾಟಗಾರ ವಾಟಳ್ ನಾಗರಾಜ ಇಂದು ಪ್ರತಿಭಟನೆ ನಡೆಸಿದ್ದರು.
ಬಿಬಿಎಂಪಿ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿ, ಮಾರ್ವಾಡಿ ಸಮುದಾಯಕ್ಕೆ ಸೇರಿದ ಗೌತಮ್ ಕುಮಾರ್ ಮಾರ್ವಾಡಿ ಅವರನ್ನು ಆಯ್ಕೆ ಮಾಡುವ ಬದಲು ಕನ್ನಡಿಗರಿಗೆ ಆಯ್ಕೆ ಮಾಡ ಬಹುದಿತ್ತುದೆಂದು ಕಿಡಿಕಾರಿದರು.
ಯಾರು ಗೌತಮ್ ಕುಮಾರ್?.
ಎರಡು ಬಾರಿ ಬಿಜೆಪಿಯಿಂದ ಜೋಗುಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿ ಆಯ್ಕೆಯಾದ… ಗೌತಮ್ ಕುಮಾರ್, RSSನಲ್ಲಿ ಗುರುತಿಸಿಕೊಂಡಿದ್ದಾರೆ. ಬಿಕಾಂ ಪದವೀಧರರಾಗಿರುವ ಗೌತಮ್ ಕುಮಾರ್, ಎಂದಿಗೂ ಪಕ್ಷ ಮತ್ತು ಸಂಘದ ಮಾತನ್ನು ಯಾವತ್ತೂ ಮೀರಿದವರಲ್ಲ.