ಮತ್ತೆ ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿದ ಸೈಯದ್

ಮತ್ತೆ ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿದ ಸೈಯದ್

ಬೆಂಗಳೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಮತ್ತೊಮ್ಮೆ ಸೈಯದ್ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. 2014ರಲ್ಲಿ ಕಣಕ್ಕಿಳಿದಿದ್ದ ಈ ಚಾಯ್ ವಾಲ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಸೈಯಸ್ ಆಸಿಫ್ ಬುಖಾರಿ ಅವರಿಗೆ ಈ ಬಾರಿ ಕ್ಯಾಲ್ಕುಲೇಟರ್ ಚಿಹ್ನೆ ಸಿಕ್ಕಿದೆ. ‘ನಾನು ಚಾಯ್ ವಾಲಾ ನನಗೆ ಮತ ಹಾಕಿ’ ಎಂದು ಸೈಯದ್ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ಬಿಬಿಎಂಪಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೈಯದ್ ಆಸೀಫ್, ಈಗ ಮತ್ತೊಮ್ಮೆ ಲೋಕಸಭಾ ಅಖಾಡದಲ್ಲಿದ್ದಾರೆ.

25 ಸಾವಿರ ಠೇವಣಿ ಹಣ, ಚುನಾವಣಾ ಖರ್ಚು ವೆಚ್ಚ ಮೊತ್ತವನ್ನು ಸರಿಯಾಗಿ ನೀಡಿದ್ದೇನೆ. ಭ್ರಷ್ಟಮುಕ್ತ ಆಡಳಿತಕ್ಕಾಗಿ ಚುನಾವಣೆ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. 2015ರಲ್ಲಿ ಸೈಯದ್ ಅವರಿಗೆ ಭಾರತದ ಶ್ರೇಷ್ಠ ನಾಗರಿಕ ಎಂಬ ಪ್ರಶಸ್ತಿ ಸಿಕ್ಕಿದೆ. ಈ ಬಗ್ಗೆ ಟ್ವೀಟ್ ಕೂಡಾ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos