ಮೀರತ್, ಮಾ.28, ನ್ಯೂಸ್ ಎಕ್ಸ್ ಪ್ರೆಸ್: ಮತ್ತೇ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆಂದು ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಮೀರತ್ ನಲ್ಲಿ ಚುನಾವಣಾ ಸಮಾವೇಶವೊಂದನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಿದ್ದರು.
ಹಳೆಯ ಸರ್ಕಾರಗಳು ಮಾಡಿದ ಕೆಲಸಕ್ಕೂ, ಈಗಿರುವ ಸರ್ಕಾರ ಮಾಡಿದ ಕೆಲಸಕ್ಕೂ ಹೋಲಿಸಿ ನೋಡಿದರೆ ನಮ್ಮ ಸರ್ಕಾರದ ಸಾಧನೆ ಅರ್ಥವಾಗುತ್ತದೆ. ಅದು ಜನರಿಗೂ ತಿಳಿಸಿದೆ. ಆದ್ದರಿಂದ ಜನರು ನಮ್ಮನ್ನು ಮತ್ತೆ ಗೆಲ್ಲಿಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.