ಬೆಂಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್: ರಾಜಾಜಿನಗರದ ಶ್ರೀ ಮಾತೆ ಮಹಾದೇವಿಯವರ ಬಸವ ಮಂಟಪದಲ್ಲಿ ನೀರವ ಮೌನ. ಶೋಕ ಸಾಗರದಲ್ಲಿ ಭಕ್ತರು ಲಿಂಗೈಕ್ಯರಾದ ಮಾತೆ ಮಹಾದೇವಿಯವರ ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶೋಕಸಾಗರದಲ್ಲಿ ದುಃಖತಪ್ತರಾಗಿ ಅಂತಿಮ ನಮನ ಸಲ್ಲಿಸುತ್ತಿದ್ದರು.
ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳವರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಸ್ಥಳೀಯ ನಾಯಕರು ಆಗಮಿಸಿ ಮಾತೆ ಮಹಾದೇವಿಯವರಿಗೆ ನಮಿಸಿದರು.
ಅನಾರೋಗ್ಯದಿಂದ ನಿನ್ನೆ ಲಿಂಗೈಕ್ಯರಾದ ಪ್ರಥಮ ಲಿಂಗಾಯತ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಬಸವ ವಿಧಿವಿಧಾನದಂತೆ ಕೂಡಲಸಂಗಮದಲ್ಲಿ ನೆರವೇರಲಿದೆ.