ಮೈಸೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಕೆಲ ಮತದಾರ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿರುವುದು ವರದಿ ಆಗಿದೆ.
ಮತದಾನ ಮಾಡಲು ಬಂದಿದ್ದ 79ರ ವೃದ್ಧೆ ಶೀಲಾ ಶಾಂಭವ ಮೂರ್ತಿ ಎಂಬುವವರ ಹೆಸರೇ ವೋಟರ್ ಲಿಸ್ಟ್ ನಲ್ಲಿ ಕಣ್ಮರೆಯಾಗಿತ್ತು.
ಎಲ್ಲಾ ದಾಖಲೆ ಇದ್ದರೂ ಲಿಸ್ಟ್ ನಲ್ಲಿ ಹೆಸರಿಲ್ಲದಿದ್ದಕ್ಕೆ ಮತದಾನಕ್ಕೆ ಅವಕಾಶ ನೀಡದೆ ಮತಗಟ್ಟೆ ಅಧಿಕಾರಿಗಳು ತಮ್ಮನ್ನು ಕಳುಹಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳ ವಿರುದ್ಧ ಚಾಮುಂಡಿಪುರಂನ ನಿವಾಸಿರವರು ಅಸಮದಾನ ವ್ಯಕ್ತಪಡಿಸಿದರು. ಇದೇ ವೇಳೆ ವೃದ್ಧೆಯವರೊಂದಿಗೆ ಮತ್ತಷ್ಟು ಜನರು ಸಹ ತಮ್ಮ ಹೆಸರು ಸಹ ಪಟ್ಟಿಯಲ್ಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.