ಅಮರಾವತಿ ಏ. 11, ನ್ಯೂಸ್ ಎಕ್ಸ್ ಪ್ರೆಸ್: ಮೊದಲ ಹಂತದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಆಂಧ್ರಪ್ರದೇಶದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ 2 ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಕಾದಾಟದಲ್ಲಿ 2 ಹತ್ಯೆಯಾಗಿದೆ.
ಇಲ್ಲಿನ ಅನಂತಪುರ ಜಿಲ್ಲೆಯ ಪೀಠಾಪುರ ಎಂಬಲ್ಲಿ ಟಿಡಿಪಿ ಮತ್ತು ವೈಎಸ್ ಆರ್ ಸಿಪಿ ಪಕ್ಷದ ಕಾರ್ಯಕರ್ತರ ನಡುವೆ ಕ್ಷುಲ್ಲಕ ವಿಷಯಕ್ಕಾಗಿ ಗಲಾಟೆ ಆರಂಭವಾಗಿತ್ತು. ಅದೇ ವಿಕೋಪಕ್ಕೆ ತಿರುಗಿದ ಕಾರಣ ಭಾಸ್ಕರ ರೆಡ್ಡಿ ಮತ್ತು ಪುಲ್ಲಾರೆಡ್ಡಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲ್ಲಲಾಗಿದೆ.
.