ಚಿಕ್ಕಮಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಸುರುವಾಗಿದೆ. ರಾಜ್ಯದಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಮತದಾದನ ನಡೆಯುತ್ತಿದೆ. ಇತ್ತ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ವ್ಯಕ್ತಿಯೋರ್ವ ಮತದಾನ ಮಾಡಿದ ಫೊಟೊ ಒಂದು ವೈರಲ್ ಆಗಿದೆ.
ಬಿಜೆಪಿಗೆ ಮತ ಹಾಕಿದ ವ್ಯಕ್ತಿ ಎವಿಎಂ ಫೊಟೊ ತೆಗೆದು ವೈರಲ್ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆಗೆ ಮತ ಹಾಕಿದ್ದು, ಗೌಪ್ಯತೆ ಕಾಪಾಡಬೇಕಾದ ಮತದಾನವನ್ನು ಬಹಿರಂಗ ಮಾಡಿದ್ದಾರನೆ.