ಬೃಹತ್ ತಮಟೆ ಚಳುವಳಿ

ಬೃಹತ್ ತಮಟೆ ಚಳುವಳಿ

ಕೆಆರ್ ಪುರ, ಫೆ. 28: ಮಹದೇವಪುರ ಕ್ಷೇತ್ರದ ರಾಮಗೊಂಡನಹಳ್ಳಿ ಗ್ರಾಮದ ಸರ್ವೇ ನಂ.105/106 ರ ಲಾಫಿಂಗ್ ವಾಟರ್ ಬಡಾವಣೆಗೆ ಅಕ್ರಮ ಮಂಜೂರಾತಿಯನ್ನು ವಿರೋಧಿಸಿ ಹಾಗೂ ವಶಪಡಿಸಿಕೊಂಡಿರುವ ಸರ್ಕಾರಿ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಯತೀಶ್ ಗೌಡ ಒತ್ತಾಯಿಸಿದರು.

ಬೆಂಗಳೂರು ಪೂರ್ವ ತಾಲೂಕು ಕಚೇರಿಗೆ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಜಾತ ಮೂಲಕ ತಲುಪಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಅವರು, ಕೂಡಲೇ ಭೂ ಕಂದಾಯ ಕಾಯಿದೆ 1954 ರ ಕಲಂ 96 ರಂತೆ ನೋಟಿಸ್ ನೀಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಮುಚ್ಚಿರುವ ಬಂಡಿದಾರಿ ಹಾಗೂ ರಾಜಕಾಲುವೆಗಳನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಿ ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ಈ ಸರ್ವೆ ನಂ.  ಗೆ ಸಂಬಂಧಪಟ್ಟಂತೆ ಯಾವುದೇ ಉಪ ನೋಂದಣಿ ಕಚೇರಿಯಲ್ಲಿ ಲೇಔಟ್ ಪ್ಲಾನ್ ನೊಂದಣಿ ಮಾಡಬಾರದು, ಬಿಬಿಎಂಪಿ ಕಚೇರಿಯಲ್ಲಿ ವಗೈರೆ ವಹಿವಾಟು ನಡೆಸಬಾರದು ಎಂದು ಆಗ್ರಹಿಸಿದರು.

ಸರ್ಕಾರಿ ಜನೀನುಗಳ ಒತ್ತುವರಿ ತೆರವು ಮಾಡಬೇಕಾಗಿರುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಆಸೆ ಆಮಿಷಗಳಿಗೆ ಬಲಿಯಾಗದೆ ಸರ್ಕಾರಿ ಜಮೀನುಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಬಡಾವಣೆ ನಿರ್ಮಾಣ ಹೆಸರಿನಲ್ಲಿ ಲಾಫಿಂಗ್ ವಾಟರ್ ನವರು ರಾಮಗೊಂಡನಹಳ್ಳಿ ಸರ್ವೇ ನಂಬರ್ 105/106 ರಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿರುವ 4 ಎಕರೆ ಸರ್ಕಾರಿ ಭೂಮಿ ಯನ್ನು ತಾಲೂಕು ದಂಡಾಧಿಕಾರಿ ಗಳು ಈ ಕೂಡಲೇ ಪರಿಶೀಲನೆ ಮಾಡಿ ಸರ್ಕಾರಿ ವಶಕ್ಕೆ ಪಡೆಯಬೇಕು, ಇಲ್ಲವಾದರೆ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ವತಿಯಿಂದ ಹಂತ ಹಂತವಾಗಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೆಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬೆ.ಪೂರ್ವ ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ವೇಣು ಗೋಪಾಲ್, ಸುವರ್ಣ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ರಾಘವೇಂದ್ರ ಗೌಡ, ಪ್ರಜಾ ರಕ್ಷಣಾ ಸೇನೆ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಂ.ವಿ. ಮಂಜುನಾಥ್, ಯುವ ಘಟಕ ರಾಜ್ಯಾಧ್ಯಕ್ಷ ಜ್ಯೋತಿ ಕುಮಾರ್, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ರಾಧ ಉಮೇಶ್, ಹೊಸಕೋಟೆ ತಾಲ್ಲೂಕು ಅಧ್ಯಕ್ಷೆ ಸುಮತಿ ರೆಡ್ಡಿ, ಮುಖಂಡರಾದ ಡಿಪಿಐ ರಾಜಣ್ಣ, ರಾಮ ಭಕ್ತ ಹೂಡಿ ಮಂಜುನಾಥ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos