‘ಮನ್ಸೂರ್’ ರೀತಿಯಲ್ಲೆ ಮೆಹಬೂಬ್ ಎಸ್ಕೇಪ್!

‘ಮನ್ಸೂರ್’ ರೀತಿಯಲ್ಲೆ ಮೆಹಬೂಬ್ ಎಸ್ಕೇಪ್!

ಬಳ್ಳಾರಿ, ಜೂ. 20 : ಐಎಂಎ ಪ್ರಕರಣ ಮಾಸುವ ಮುನ್ನವೇ ಈಗ ಬಳ್ಳಾರಿ ಜಿಲ್ಲೆ ಅದೇ ಮಾದರಿಯ ಬಡ ಅಮಾಯಕ ಜನರನ್ನು ನಂಬಿಸಿ ವಂಚಿಸಿದ್ದಾರೆ. ಈ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಮ್ಮ ಜನ ಇಂತಹ ಅದೆಷ್ಟೋ ಘಟನೆಗಳು ನಡೆದರೂ ಇನ್ನೂ ಬುದ್ಧಿ ಕಲಿತಿಲ್ಲ. ಐಎಂಎ ವಂಚಕ ಮನ್ಸೂರ್ ಖಾನ್ ರೀತಿಯಲ್ಲೇ ಬಳ್ಳಾರಿಯಲ್ಲೊಬ್ಬ ನೂರಾರು ಜನರಿಗೆ ಪಂಗನಾಮ ಹಾಕಿದ್ದಾನೆ. ಏಜೆನ್ಸಿಯೊಂದು ಹಜ್ ಉಮ್ರಾ ಯಾತ್ರೆ ಹೆಸರಲ್ಲಿ ನೂರಾರು ಜನರಿಗೆ ಪಂಗನಾಮ ಹಾಕಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದಾನೆ.

ಹೊಸಪೇಟೆಯ ಮೆಹಬೂಬ್ ಸಾಬ್ ಪವಿತ್ರ ಸ್ಥಳವಾದ ಮೆಕ್ಕಾ ಮದೀನಾಕ್ಕೆ ಕಳಿಸುತ್ತೇವೆಂದು ಒಬ್ಬೊಬ್ಬರಿಂದ ತಲಾ 30 ರಿಂದ 60 ಸಾವಿರ ರೂಗಳಂತೆ 150ಕ್ಕೂ ಹೆಚ್ಚು ಜನರಿಂದ ಹಣ ಪೀಕಿ ಪರಾರಿಯಾಗಿದ್ದಾನೆ. ವಂಚನೆಗೊಳಗಾದ ನೂರಾರು ಜನ ಈಗ ಯಾತ್ರೆಯೂ ಇಲ್ಲದೇ ಹಣವೂ ಸಿಗದೇ ಕಣ್ಣಿರಿಡುತ್ತಿದ್ದಾರೆ. ಯಾತ್ರೆಗೆ ಹೋಗಲು ಹಣ ಕೊಟ್ಟವರು ದಿನನಿತ್ಯ ಈತನ ಕಚೇರಿಗೆ ಬಂದು ವಾಪಸ್ ಆಗಿದ್ದಾರೆ. ಆದರೆ ಈತ ಮಾತ್ರ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಕಚೇರಿಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ.  ಜನರು ಹಣವೂ ಇಲ್ಲದೆ ಯಾತ್ರೆಗೂ ಹೋಗದೆ ಬಳ್ಳಾರಿ ಐಜಿಪಿ ಎಂ.ನಂಜುಂಡಸ್ವಾಮಿಯವರಿಗೆ ದೂರು ನೀಡಿದ್ದಾರೆ.  ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos