ಮರ್ಯಾದಾ ಹತ್ಯೆ: ಮಗಳನ್ನು ಕೊಲೆಗೈದ ಆರೋಪಿ ತಂದೆ ಸೆರೆ

ಮರ್ಯಾದಾ ಹತ್ಯೆ: ಮಗಳನ್ನು ಕೊಲೆಗೈದ ಆರೋಪಿ ತಂದೆ ಸೆರೆ

ದಾವಣಗೆರೆ: ಜಗಳೂರು ತಾಲೂಕಿನ ಬಿಸ್ತುವಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು, ಯುವತಿಯೊಬ್ಬಳನ್ನು ತಂದೆಯೇ ಕತ್ತು ಹಿಚುಕಿ ಕೊಲೆಗೈದಿರುವ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಸ್ತುವಳಿ ಗ್ರಾಮದ ಅನಿತಾ(24) ಕೊಲೆಯಾದ ಯುವತಿ. ಈಕೆ ತಂದೆ ಕಲ್ಲೇಶಪ್ಪ(56) ಕೊಲೆ ಆರೋಪಿ. ಅನಿತಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಇದನ್ನು ತಂದೆ ಕಲ್ಲೇಶಪ್ಪ ವಿರೋಧಿಸಿದ್ದನೆನ್ನಲಾಗಿದೆ. ಇದೇ ವಿಚಾರವಾಗಿ ಗುರುವಾರ ಬಿಸ್ತುವಳಿಯಲ್ಲಿರುವ ಅಡಿಕೆ ತೋಟದಲ್ಲಿ ಅನಿತಾರನ್ನು ಕಲ್ಲೇಶಪ್ಪ ಕತ್ತು ಹಿಚುಕಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಕಲ್ಲೇಶಪ್ಪ ಹಾಗೂ ಅನಿತಾರ ಚಿಕ್ಕಪ್ಪನನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.

ಸ್ಥಳಕ್ಕೆ ಹರಪನಹಳ್ಳಿ ಡಿವೈಎಸ್ಪಿನಾಗೇಶ ಐತಾಳ್ ಭೇಟಿ ಪರಿಶೀಲನೆ ನಡೆಸಿ
ತನಿಖೆ ಮುಂದುವರಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos