ಬೆಳಗಾವಿಯಲ್ಲಿ ಮಾರಾಮಾರಿ!

ಬೆಳಗಾವಿಯಲ್ಲಿ ಮಾರಾಮಾರಿ!

ಬೆಳಗಾವಿ, ಸೆ. 3: ನಾಡಿನಾದ್ಯಂತ ಗಣೇಶ ಹಬ್ಬವನ್ನ ಬಹಳ ವಿಜೃಂಭಣಿಯಿಂದ ಆಚರಿಸಲಾಗುತಿದ್ದು, ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದಲ್ಲಿ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮೆರವಣಿಗೆ ವೇಳೆ ಗುಂಪು ಘರ್ಷಣೆಯಾಗಿ ಮಾರಕಕಾಸ್ತ್ರಗಳಿಂದ ಮಾರಾಮಾರಿಯಾಗಿ 4 ಜನರಿಗೆ ಗಾಯಗೊಂಡ ಘಟನೆ ನಡೆದಿದೆ.

ಮಂಡೋಳಿ ಮಹೇಶ ಕೃಷ್ಣಾ ದಳವಿ(22), ಶೇಖರ ಕೃಷ್ಣಾ ದಳವಿ(27), ಕಲ್ಪನಾ ಕೃಷ್ಣಾ ದಳವಿ(48) ಹಾಗೂ ರಾಜು ಖಂಡೋಬಾ ಪಾಟೀಲ(ಬಡಸ್ಕರ)(24) ಎಂಬವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ನೆನ್ನೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ ವೇಳೆ ಒಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿತ್ತು. ಆಗ ಇದನ್ನು ಕೇಳಿದ ಮತ್ತೊಂದು ಗುಂಪಿನ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಗುಂಪು ಘರ್ಷಣೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಎಸಿಪಿ ಕೆ. ಶಿವಾರೆಡ್ಡಿ, ಇನ್ಸ್ಪೆಕ್ಟರ್ ಸಂಗಮೇಶ ಶಿವಯೋಗಿ ಹಾಗೂ ಪೊಲೀಸರು ಭೇಟಿ ನೀಡಿ ಬಂದೋಬಸ್ತ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos