ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಮದ್ದೂರು, ಅ. 24 : ಹಳೆ ದ್ವೇಷದಿಂದ ಹಾಡಹಗಲೇ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಮಾದೇಶ್ವರ ಬೆಟ್ಟದಲ್ಲಿ ತಲೆಮರೆಸಿಕೊಂಡಿದ್ದ ಐದು ಮಂದಿಯ ತಂಡವನ್ನು ಕೆಎಂ ದೊಡ್ಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದ್ದೂರು ತಾಲ್ಲೂಕಿನ ಶಿವಪುರ ಗ್ರಾಮದ ಪ್ರವೀಣ್, ನಿರಂಜನ್, ಕಾರ್ತಿಕ್, ಅನಂತಕುಮಾರ್ ಮತ್ತು ಸಚಿನ್ಗೌಡ ಬಂಧಿತರು.

ಈ ಹಿಂದೆ ಪ್ರವೀಣ್ ಮತ್ತು ನವೀನ್ ನಡುವೆ ಜಗಳ ನಡೆದಿದ್ದು, ಆ ಸಂದರ್ಭದಲ್ಲಿ ಪ್ರವೀಣನ ಬಾಯಿಗೆ ಹೊಡೆದಿದ್ದರಿಂದ ಹಲ್ಲುಗಳು ಮುರಿದಿದ್ದವು. ಈ ವಿಚಾರವಾಗಿ ಪ್ರವೀಣ್ ಹಲ್ಲು ಕಟ್ಟಿಸಿಕೊಡುವಂತೆ ನವೀನ್ನನ್ನು ಕೇಳಿದ್ದಾನೆ. ಆತ ನಿರಾಕರಿಸಿದ್ದರಿಂದ ಈತನ ಮೇಲೆ ದ್ವೇಷ ಇಟ್ಟುಕೊಂಡಿದ್ದನು. ಅ.19ರಂದು ಬೆಳಗ್ಗೆ 11 ಗಂಟೆಯಲ್ಲಿ ಕೆಎಂ ದೊಡ್ಡಿ ಪಟ್ಟಣದ ಹಲಗೂರು ಸರ್ಕಲ್ ಬಳಿ ನವೀನ್ ಬೈಕ್ನಲ್ಲಿ ಹೋಗುತ್ತಿದ್ದಾಗ ಪ್ರವೀಣ್ ತನ್ನ ಸಹಚರರೊಂದಿಗೆ ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಕಿಬ್ಬೊಟ್ಟೆ ಹಾಗೂ ಎದೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos