ಮಂಗಳೂರು, ಜು. 8 : ನಿಷೇಧವಿದ್ದರೂ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರು ನಡೆದಿದೆ.
ಮಂಗಳೂರು ಜಿಲ್ಲೆಯ ಸಮೀಪದ ಸಸಿಹಿತ್ಲುವಿನಲ್ಲಿ ಕಾವೂರಿನ ಗುರುಪ್ರಸಾದ್ (28) ಹಾಗೂ ಬಜ್ಪೆ ಗ್ರಾಮದ ನಿವಾಸಿ ಸುಜಿತ್ (32) ಮೃತ ದುರ್ದೈವಿಗಳು ಇವರೊಡನೆ ಈಜಲು ತೆರಳಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೃತ ಸುಚಿತ್ ಮಂಗಳೂರಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದರೆ, ಗುರುಪ್ರಸಾದ್ ಕಾವೂರಿನಲ್ಲಿ ಕೆಲಸದಲ್ಲಿದ್ದನು.
ಬಜ್ಪೆ ಮೂಲದ ಸೃಜನ್ ಹಾಗೂ ಕಾಂರ್ತಿಕ್ ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು ಇದರಲ್ಲಿ ಸೃಜನ್ ತೀವ್ರ ಅಸ್ವಸ್ಥರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.