ಮನೆ ಬಾಡಿಗೆ ನೀಡುವ ಮಾಲೀಕರೇ ಹುಷಾರ್..!

ಮನೆ ಬಾಡಿಗೆ ನೀಡುವ ಮಾಲೀಕರೇ ಹುಷಾರ್..!

ಬೆಂಗಳೂರು, ಅ. 26 : ಅಕ್ರಮ ವಲಸಿಗರಿಗೆ ಮನೆ ಬಾಡಿಗೆ ಕೊಟ್ಟವರ ಮೇಲೂ ಪ್ರಕರಣ ದಾಖಲಿಸುತ್ತೇವೆ. ಮನೆ ನೀಡುವ ಮುಂಚೆ ದಾಖಲಾತಿಗಳನ್ನು ಪರಿಶೀಲಿಸಿ ಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಸಿಬಿ ಪೊಲೀಸರ ಕಾರ್ಯಾ ಚರಣೆ ಯಶಸ್ವಿಯಾಗಿದೆ. ವಿದೇಶಿಗರನ್ನು ಭಾರತಕ್ಕೆ ಕರೆತಂದಿದ್ದವರ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕ್ರಮವಾಗಿ ನೆಲೆಸಿದ್ದ ಪುರುಷರು, ಮಹಿಳೆಯರನ್ನು ಠಾಣೆಯಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ ಬಾಂಗ್ಲಾ ವಲಸಿಗರು ನಗರಕ್ಕೆ ಬಂದಿದ್ದಾರೆ. ಗುತ್ತಿಗೆದಾರರು ಇವರನ್ನು ಕರೆದುಕೊಂಡು ಬಂದಿದ್ದಾರೆಂಬ ಮಾಹಿತಿ ಇದೆ.
60 ಬಾಂಗ್ಲಾ ಪ್ರಜೆಗಳ ಸೆರೆ : ನಗರದಲ್ಲಿ ಅಪರಾಧಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 60 ಮಂದಿಯನ್ನು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos