ಮಂಡ್ಯ: ನಾಗಮಂಗಲ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಿಗೆ ಕಾಚೇನಹಳ್ಳಿಯ ಥಾರ್ ಮಿಕ್ಸಿಂಗ್ ಘಟಕ ಕಂಟಕವಾಗಿದೆ.ಮಂಡ್ಯದ ನಾಗಮಂಗಲದಲ್ಲಿರುವ ಥಾರ್ ಮಿಕ್ಸಿಂಗ್ ಘಟಕದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ಅನಧಿಕೃತವಾಗಿ ಕೃಷಿ ಭೂಮಿಯಲ್ಲಿ ಆರಂಭಿಸಲಾಗಿದ್ದು, ಇದರಿಂದ ಬರುವ ಹೊಗೆ ಮತ್ತು ಮಲಿನಕಾರಕಗಳಿಂದ ಸುತ್ತಮುತ್ತಲ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಕೃಷಿ ಚಟುವಟಿಕೆಗಳಿಗೆ, ಜಾನುವಾರುಗಳಿಗೆ ತೊಂದರೆ ಉಂಟಾಗುತ್ತಿರುವುದರಿAದ ಈ ಘಟಕವನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.