ಮಂಡ್ಯದಲ್ಲಿ ಹೆಣ್ಣು ಸಿಕ್ಕರೆ ಮದುವೆ ಆಗ್ತೀನಿ: ನಿಖಿಲ್

ಮಂಡ್ಯದಲ್ಲಿ ಹೆಣ್ಣು ಸಿಕ್ಕರೆ ಮದುವೆ ಆಗ್ತೀನಿ: ನಿಖಿಲ್

ಮಂಡ್ಯ, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದಲ್ಲಿ ಹೆಣ್ಣು ಸಿಕ್ಕಿದ್ರೆ ಮದುವೆ ಆಗ್ತೀನಿ ಅಂತಾ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ನಡೆದ ಮೈತ್ರಿ ಪಕ್ಷಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್, ಶಾಸಕ ಸುರೇಶ್​ ಗೌಡ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಮನೆಯಲ್ಲಿ‌ ನನ್ನ ಮದುವೆಗೆ ಹೆಣ್ಣು ಹುಡುಕುತ್ತಿದ್ದಾರೆ. ಹೀಗಾಗಿ ನಿಖಿಲ್ ಮಂಡ್ಯ ಅಳಿಯ ಆದರೂ ಆಗಬಹುದು ಎಂದು ಸುರೇಶ್‌ಗೌಡ ಹೇಳಿದ್ದಾರೆ ಅಷ್ಟೇ. ಮಂಡ್ಯದಲ್ಲಿ ಹೆಣ್ಣು ಸಿಕ್ಕಿದ್ರೆ ಮದುವೆ ಆಗ್ತೀನಿ ಎಂದರು.

​​​​ಇನ್ನು 25ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಎಲ್ಲರೂ ಬೆಂಬಲಿಬೇಕು ಎಂದು ಮನವಿ ಮಾಡಿದ್ರು. ಇದೇ ವೇಳೆ ಯಾರೂ ಯಾರ ಬಗ್ಗೆಯೂ ಪರ್ಸನಲ್ ಆಗಿ ಮಾತನಾಡಬೇಡಿ, ಇದು ಒಳ್ಳೆಯದಲ್ಲ. ಜನರ ತೀರ್ಪೇ ಅಂತಿಮ ಎಂದು  ಕಾರ್ಯಕರ್ತರಿಗೆ  ನಿಖಿಲ್ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos