ಮಲೆ ಮಾದಪ್ಪನ ಮಹಾಜ್ಯೋತಿ

ಮಲೆ ಮಾದಪ್ಪನ ಮಹಾಜ್ಯೋತಿ

ಚಾಮರಾಜನಗರ, ನ. 26 : ಕಡೇ ಕಾರ್ತಿಕ ಸೋಮವಾರ ನಿಮಿತ್ಯ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.
ಆನೆತಲೆದಿಂಬ ಹಾಗೂ ನಾಗಮಲೆ ನಡುವಿನ ನಡುಮಲೆಯಲ್ಲಿ ದೀಪದ ಒಡ್ಡಿನಲ್ಲಿ 9 ಬಗೆಯ ಕಟ್ಟಿಗೆಗಳಿಂದ ಹೋಮ ಪೂರ್ಣವಾಗುವ ಹೊತ್ತಿಗೆ ದೇಗುಲದಿಂದ ಉತ್ಸವಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತಂದು ಪೂಜೆ ಸಲ್ಲಿಸಿ 8 ಟಿನ್ ಎಣ್ಣೆ ಸುರಿದ ಮಹಾದೀಪವನ್ನು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜೈವಿಭುವಸ್ವಾಮಿ, ಸಾಲೂರುಶ್ರೀ, ಬೇಡಗಂಪಣ ಅರ್ಚಕರು ಬೆಳಗಿಸಿದರು.
ಬಳಿಕ, ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದ ಬೆಟ್ಟದಲ್ಲಿ ಸ್ವಾಮಿಗೆ ತೆಪ್ಪೋತ್ಸವ ನಡೆಯಿತು. ಇದೇ ವೇಳೆ, ಭಕ್ತರು ಬಾಣ- ಬಿರುಸು, ಪಟಾಕಿ ಸಿಡಿಸಿ ಶ್ರದ್ಧಾ ಭಕ್ತಿಗೆ ಸಂಭ್ರಮ ಬೆರೆಸಿದರು.
ಇನ್ನು, ಕ್ಷೇತ್ರದಲ್ಲಿ ನಿರಂತರ ದಾಸೋಹ ನಡೆದಿದ್ದು ಬರೋಬ್ಬರಿ 690 ಚಿನ್ನದ ತೇರಿನ ಸೇವೆಯೂ ಸ್ವಾಮಿಗೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos