ಶಾಸಕರ ವಾಕಿಂಗು, ಮೀಟಿಂಗು..!

ಶಾಸಕರ ವಾಕಿಂಗು, ಮೀಟಿಂಗು..!

ಬೆಂಗಳೂರು, ಜು. 10 : ಆಪರೇಷನ್ ಕಮಲದ ಭೀತಿಯಿಂದ 2 ದಿನಗಳಿಂದ ದೇವನಹಳ್ಳಿ ರೆಸಾರ್ಟ್ನಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಶಾಸಕರು ಇಂದು ಬೆಳಗ್ಗೆ ಯೋಗ, ವ್ಯಾಯಾಮ, ವಾಯುವಿಹಾರದಲ್ಲಿ ನಿರತರಾಗಿದ್ದರು. ಜು.12 ರಿಂದ ಆರಂಭವಾಗುವ ಮಳೆಗಾಲದ ಅಧಿವೇಶನದವರೆಗೂ ರೆಸಾರ್ಟ್ನಲ್ಲೇ ಜೆಡಿಎಸ್ ಶಾಸಕರು ಉಳಿದುಕೊಳ್ಳಲಿದ್ದಾರೆ. ನಿನ್ನೆ ರೆಸಾರ್ಟ್ನಲ್ಲಿರುವ ಶಾಸಕರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟ ಪರಿಹಾರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಶಾಸಕರು ಆಮಿಷಕ್ಕೆ ಒಳಗಾಗಬಾರದು. ಒಗ್ಗಟ್ಟು ಮುಂದುವರೆ ಸಬೇಕೆಂದು ಮನವಿ ಮಾಡಿದ್ದಾರೆ. ಕೆಲ ಶಾಸಕರು ಯೋಗ ಮಾಡಿದರೆ, ಮತ್ತೆ ಕೆಲವರು ವಾಯುವಿಹಾರ ಹಾಗೂ ಧ್ಯಾನ ಮಾಡಿದರು. ಮೈತ್ರಿಗೆ ಎದುರಾಗಿರುವ ಗಂಡಾಂತರ ಪಾರು ಮಾಡಲು ಕಾಂಗ್ರೆಸ್-ಜೆಡಿಎಸ್ ವರಿಷ್ಠರು ಹರಸಾಹಸ ಪಡುತ್ತಿದ್ದು, ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಜೆಡಿಎಸ್ ಶಾಸಕರು ರೆಸಾರ್ಟ್ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಮುಂಬೈನಲ್ಲಿ ಉಳಿದುಕೊಂಡಿರುವ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನವನ್ನು ಉಭಯ ಪಕ್ಷಗಳು ಮುಂದುವರೆಸಿವೆ. ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪರಿಸ್ಥಿತಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಜೆಡಿಎಸ್ ಶಾಸಕರು ಹಾಗೂ ನಾಯಕರು ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos