ಸವಲತ್ತುಗ ಸದುಪಯೋಗ ಮಾಡಿಕೊಳ್ಳಿ

ಸವಲತ್ತುಗ ಸದುಪಯೋಗ ಮಾಡಿಕೊಳ್ಳಿ

ಪೀಣ್ಯ: ಸರ್ಕಾರದ ಸೌಲತ್ತುಗಳನ್ನು ಸಮರ್ಪಕವಾಗಿ ಸದುಪಯೋಗ ಮಾಡಿಕೊಳ್ಳಲು ಹಾಗೂ ಮಹಿಳೆಯರಿಗೆ ಮಾರ್ಗದರ್ಶನ ನೀಡಲು ಮಹಿಳಾ ಘಟಕದ ಪದಾಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಹೇಳಿದರು.
೮ನೇ ಮೈಲಿಯಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಆಯೋಜಿಸಲಾದ ಬೆಂಗಳೂರು ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ನಮ್ಮ ಸಂಘಟನೆ ರಾಜ್ಯದಲ್ಲೆಡೆ ಆರೋಗ್ಯ ಶಿಬಿರಗಳನ್ನು ಮಾಡುತ್ತಾ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ, ಇಂತಹ ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಿ ನಮಗೆ ದೊಡ್ಡ ಜವಾಬ್ದಾರಿ ಕೊಟ್ಟ ಮುತ್ತಪ್ಪ ರೈ ಅವರನ್ನು ಸದಾ ನೆನಪಿಸಿಕೊಂಡು ಸಮಾಜದ ಹಿತ ಕಾಪಾಡುತ್ತೇವೆ” ಎಂದರು.
ಕಿರುತೆರೆ ನಟಿ ದೀಪಿಕಾ ದಾಸ್ ಮಾತನಾಡಿ ಸಮಾಜದಲ್ಲಿ ಹೆಣ್ಣು ಮಕ್ಕಳು ಸಹ ಮುಂದೆ ಬರಲಿ ಎಂದು ಭಾವಿಸಿ ಅವರಿಗೆ ಅಧಿಕಾರ ನೀಡುತ್ತಿರುವುದು ಸಂತೋಷದ ವಿಷಯ ಎಂದರು.
ಸಮಾಜ ಸೇವಕಿ ಸುಶೀಲಾ ಮಂಜುನಾಥ್, ವಕೀಲೆ ಮಂಜುಳಾ, ಚಿತ್ರನಟಿ ನೀತು ಶೆಟ್ಟಿ, ಕಿರುತೆರೆ ನಟಿ ಕಾವ್ಯ, ನೂತನ ನಗರ ಜಿಲ್ಲಾಧ್ಯಕ್ಷ ಡಾ.ಎಂ ಜಗದೀಶ್ ಗೌಡ, ಮಹಿಳಾ ಅಧ್ಯಕ್ಷೆ ಪುಷ್ಪಾವತಿ, ರಾಮಚಂದ್ರಪ್ಪ ಪದಾಧಿಕಾರಿಗಳಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos