ಮೈಸೂರು, ಅ.18 : ಅನರ್ಹ ಶಾಸಕ ಎಚ್.ವಿಶ್ವನಾಥ್ ಜೊತೆಗಿನ ಆಣೆ ಪ್ರಮಾಣ ರಾಜಕೀಯ ಜಿದ್ದಿಗೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೈಡ್ರಾಮಾ ನಡೆಸಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಶುಕ್ರವಾರ ಮತ್ತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು.
ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ರಾಜಕಾರಣಕ್ಕೆ ನಾಡದೇವತೆ ಸನ್ನಿಧಿಯನ್ನು ಬಳಸಿಕೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ತಾಯಿ ಚಾಮುಂಡೇಶ್ವರಿ ಹಾಗೂ ನಾಡಿನ ಜನತೆಯ ಕ್ಷಮೆ ಕೋರಿದರು.
ಗುರುವಾರದ ಘಟನೆ ಬಗ್ಗೆ ಹಲವು ಹಿರಿಯರು ರಾಜಕಾರಣದಲ್ಲಿ ಈ ರೀತಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದರಿಂದ ತಪ್ಪಿನ ಅರಿವಾಗಿ ಮತ್ತೆ ದೇವಿಯ ಸನ್ನಿಧಿಗೆ ಬಂದು ಕ್ಷಮೆ ಕೋರಿದ್ದೇನೆ. ಇನ್ನು ಮುಂದೆ ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದು ಶಪಥ ಮಾಡಿದರು.