ಹುಬ್ಬಳ್ಳಿ, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಯಾವುದೇ ಗೊಂದಲ ಇಲ್ಲದೆ ಮೈತ್ರಿ ಸರ್ಕಾರದಲ್ಲಿ ಸೀಟು ಹಂಚಿಕೆ ಮಾಡಲಾಗುವದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ನಡುವೇ ಯಾವುದೇ ಗೊಂದಲವಿಲ್ಲದಂತೆ ಸೀಟು ಹಂಚಿಕೆ ಮಾಡಿಕೊಳ್ಳಲು ಚರ್ಚೆ ಮಾಡಲಾಗುತ್ತಿದೆ. ನಮ್ಮಪಕ್ಷದ ಸಭೆ ಇದೆ 11ಕ್ಕೆ ನಡೆಯಲಿದೆ ಎಂದರು.
ಪ್ರದೇಶ ಕಾಂಗ್ರೆಸ್ ಸಭೆಯಲ್ಲಿ ಕೂಡಾ ಲೋಕಸಭೆ ಸಿಟು ಹಂಚಿಕೆ ಚರ್ಚೆ ಆಗಿದೆ. ಪಟ್ಟಿ ತಯಾರಿದೆ. ಮಿತ್ರ ಪಕ್ಷ ಹೆಚ್ಚಿನ ಸೀಟಿಗೆ ಬೇಡಿಕೆ ಇಟ್ಟಿದೆ. ಮಂಡ್ಯ ಹಾಗೂ ಹಾಸನ ಕ್ಷೇತ್ರದ ಕುರಿತು ಸಹ ಮಾತುಕತೆ ಕೂಡಾ ಮಾಡ್ತೆವೆ. ಯಾವುದೇ ಗೊಂದಲವಾಗದಂತೆ ಅಂತಿಮ ತಿರ್ಮಾನ ಮಾಡಲಾಗುವದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.