ಮಂಡ್ಯ ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣಾ ಕುರಿತು ಇಂದು ಮಂಡ್ಯದಲ್ಲಿ ನಡೆದ ಮೈತ್ರಿ ಪಕ್ಷಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಅಂಬರೀಷ್ ಆಪ್ತ ಅಮರಾವತಿ ಚಂದ್ರಶೇಖರ್ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ಅಪ್ಪಟ ಕಾಂಗ್ರೆಸ್ಸಿಗ, ಕಾಂಗ್ರೆಸ್ ಪಕ್ಷ ಯಾರಿಗೆ ಸೂಚಿಸುತ್ತೋ ಅವರಿಗೆ ನಿಷ್ಠೆಯಾಗಿ ಚುನಾವಣೆ ಮಾಡ್ತೀನಿ.
ಅಂಬರೀಶ್ ಮೇಲಿನ ಪ್ರೀತಿ ಅಂದು ಹೇಗಿತ್ತೋ ಮುಂದೆಯೂ ಹಾಗೆ ಇರಲಿದೆ. ಸುಮಲತಾಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಪ್ರಾಮಾಣಿಕವಾಗಿ ಚುನಾವಣೆ ಮಾಡುತ್ತದ್ದೆ ಎಂದು ಹೇಳಿದರು. ಸುಮಲತಾ ಅವರು ಈವರೆಗೆ ನನ್ನನ್ನು ಸಂಪರ್ಕ ಮಾಡಿಲ್ಲ. ಸಂಪರ್ಕ ಮಾಡಿದರೂ ನಾನು ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.