ಚಾಮರಾಜಪೇಟೆ, ಆ. 5: ಇಲ್ಲಿನ ಈದ್ಗಾ ಮೈದಾನದಲ್ಲಿ ಕಳೆದ ಹದಿನೈದು ದಿನಗಳಿಂದ ಆಡು ಕುರಿಗಳ ಸಂತೆ ನಡಯುತ್ತಿದ್ದು, ಮೈದಾನದ ಸುತ್ತಲೂ ಕಸ ಮತ್ತು ಅನೈರ್ಮಲ್ಯ ಕಾಡುತ್ತಿದೆ.
ಆಡು ಮತ್ತು ಕುರಿಗಳು ಹಾಕುವ ಸಗಣಿಯನ್ನು ರೈತರು ಪ್ರತಿದಿನಿ ರಸ್ತೆ ಪಕ್ಕದಲ್ಲಿ ಹಾಕಿ ಮೈದಾನವನ್ನು ಸ್ವಚ್ಚವಾಗಿಟ್ಟುಕೊಂಡಿದ್ದಾರೆ. ಆದರೆ, ಕಸವನ್ನು ಬಿಬಿಎಂಪಿ ವಿಲೇವಾರಿ ಮಾಡುವ ಗೋಜಿಗೆ ಹೋಗಿಲ್ಲ.
ತಾವು ತಂದಿರುವ ಟಗರು ಮತ್ತು ಹೋತಗಳು ಸ್ವಚ್ಚವಾಗಿರಲೆಂದು ರೈತರು ಕುರಿ, ಮೇಕೆ ಮಲಗುವ ಜಾಗ ಅಚ್ಚುಕಟ್ಟಾಗಿ ಇಟ್ಟು ಕೊಂಡಿದ್ದೇವೆ, ನಮಗೆ ವ್ಯಾಪಾರ ಆಗಬೇಕಿದೆ ಎಂದು ಮಂಡ್ಯದ ಅಪ್ಪಾಜಿ ಗೌಡ ಹೇಳಿದರು.
ರಸ್ತೆ ಬದಿ ಪ್ರತಿದಿನ ಸ್ವಚ್ಚಗೊಳಿಸುವ ಬಿಬಿಎಂಪಿ ನೌಕೃರರು ಕಳೆದ ಎರಡೂ ದಿನಗಳಿಂದ ಇಲ್ಲಿಗೆ ಸ್ವಚ್ಚತೆಗೆ ಬಂದಿಲ್ಲ ಎಂದು ಈದ್ಗಾ ಮೈದಾನ ನಿರ್ವಹಣೆ ನೋಡಿಕೊಳ್ಳುವ ಸಯದ್ ಅಯಾತ್ ಖಾನ್ ಹೇಳಿದರು.
ರೈತರು ತಂದಿರುವ ಆಡು ಮೇಕೆಗಳ ಕಸವನ್ನು ಬಿಬಿಎಂಪಿ ಯವರು ಎತ್ತುತ್ತಿಲ್ಲ ನಾವು ಈಗಾಗಲೇ ಮೂರ್ನಾಲ್ಕು ಭಾರಿ ಕಂಟ್ರೋಲ್ ರೂಮಿಗೆ ದೂರು ದಾಖಲಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.