ಬಾಡಿಗೆ ವಾಹನಗಳಲ್ಲಿ ಜನರನ್ನು ಚುನಾವಣಾ ಸಭೆಗಳಿಗೆ ಕರೆತರುವಂತಿಲ್ಲ: ಮದ್ರಾಸ್ ಹೈಕೋರ್ಟ್

ಬಾಡಿಗೆ ವಾಹನಗಳಲ್ಲಿ ಜನರನ್ನು ಚುನಾವಣಾ ಸಭೆಗಳಿಗೆ ಕರೆತರುವಂತಿಲ್ಲ: ಮದ್ರಾಸ್ ಹೈಕೋರ್ಟ್

ಚೆನ್ನೈ, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ಬಿಸಿ ಏರುತ್ತಿದಂತೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಸಭೆಗಳು ಜೋರಾಗಿ ನಡೆಯುತ್ತಿರುವ ಮಧ್ಯೆ ರಾಜಕೀಯ ಪಕ್ಷಗಳಿಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದೆ.

ಪೀಠ ಇನ್ನೂ ಮುಂದೆ ಚುನಾವಣಾ ಪ್ರಚಾರ ಸಭೆಗೆ ಬಾಡಿಗೆ ವಾಹನಗಳಲ್ಲಿ ಜನರನ್ನು ಕರೆತರುವಂತಿಲ್ಲ ಎಂದು ಹೇಳಿದೆ.

ಜನರನ್ನು ಕ್ರೋಢೀಕರಿಸಲು ಅವರನ್ನು ಬಾಡಿಗೆ ರೂಪದ ಟ್ರಕ್‌, ಬಸ್‌ ಹಾಗೂ ವ್ಯಾನ್‌ಗಳಲ್ಲಿ ಕರೆತರುವಂತಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದೆ.

ಮದುರೈ ಮೂಲದ ಕಾರ‍್ಯಕರ್ತ ಕೆ.ವಿ.ರಮೇಶ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೋರ್ಟ್‌, ಈ ಸೂಚನೆ ನೀಡಿದೆ. ಈ ಸಂಬಂಧ ಮಾರ್ಚ್‌ 27ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿ ಪಕ್ಷಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos