ಮಾಧ್ಯಮದವರ ಮೇಲೆ ಖಂಡಿಸಿ ಅಪರ ಜಿಲ್ಲಾಧಿಕಾರಿಗೆ ದೂರು

ಮಾಧ್ಯಮದವರ ಮೇಲೆ ಖಂಡಿಸಿ ಅಪರ ಜಿಲ್ಲಾಧಿಕಾರಿಗೆ ದೂರು

ಮಂಡ್ಯ, ಏ. 11, ನ್ಯೂಸ್ ಎಕ್ಸ್ ಪ್ರೆಸ್ ಮಾಧ್ಯಮಗಳ ಮೇಲೆ ಹಲ್ಲೆಯಾದರೆ ನಾನು ಹೊಣೆಯಲ್ಲ ಎಂಬ ಸಿಎಂ ಹೇಳಿಕೆ ಹಾಗೂ ಮಾಧ್ಯಮದವರ ವಾಹನಗಳ ಜಖಂ ಖಂಡಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸದಸ್ಯರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದರು. ಬೆಳಗ್ಗೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿ, ಶ್ರೀರಂಗಪಟ್ಟಣದಲ್ಲಿ ಮಾಧ್ಯಮಗಳ ವಾಹನ ಜಖಂ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾಗಲು ಕೆ.ಆರ್.ಎಸ್.ನಲ್ಲಿ ಸಿಎಂ ಕುಮಾರಸ್ವಾಮಿ ನೀಡಿದ ಪ್ರಚೋದಿತ ಹೇಳಿಕೆ ಕಾರಣವಾಗಿದೆ. ಆದ್ದರಿಂದ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು. ಯೂನಿಯನ್ ಅಧ್ಯಕ್ಷ ಬಿ.ಟಿ.ಮೋಹನ್ ಕುಮಾರ್, ಶಿವಕುಮಾರ್, ಎಂ.ಬಿ.ನಾಗಣ್ಣಗೌಡ, ಬಿ.ಟಿ.ಶಶಿಕುಮಾರ್, ಯತೀಶ್ ಬಾಬು ಮೊದಲಾದವರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos