ತುಮಕೂರು: ಸಚಿವ ಮಧು ಬಂಗಾರಪ್ಪ ಚಲುಸುತ್ತಿದ್ದ ಕಾರು ಅಪಘಾತವಾಗಿದೆ. ತುಮಕೂರಿನ ಕ್ಯಾತಸಂದ್ರ ಬಳಿ ಅಪಘಾತ ಆಗಿದೆ. ದೊಡ್ಡ ಲಾರಿ ಗುದ್ದಿ ಅಪಘಾತವಾಗಿದೆ. ಆದರೆ ಸಚಿವ ಮಧು ಬಂಗಾರಪ್ಪ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ಹಾನಿ ಕೂಡ ಆಗಿಲ್ಲ. ಸದ್ಯ ಸಚಿವರು ಸೇರಿದಂತೆ ಕಾರಿನಲ್ಲಿ ಇದ್ದ ಎಲ್ಲರೂ ಕೂಡ ಬಚಾವಾಗಿದ್ದಾರೆ. ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದಂತ ಈ ಸಮಯದಲ್ಲಿ ಅವಘಡ ಸಂಭವಿಸಿದೆ. ಕಾರನ್ನು ಉಜ್ಜಿಕೊಂಡು ದೊಡ್ಡ ಲಾರಿ ಹೋಗಿದೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಬೇರೆ ಕಾರಿನಲ್ಲಿ ಆನಂತರ ಸಚಿವರು ತೆರಳಿದ್ದಾರೆ ಕಾರಿನ ಮುಂಭಾಗ ಜಕ್ಕಂ.