ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರೀತಿಯೆಂಬ ವಿಷಯದಲ್ಲಿ ಎಷ್ಟೋ ಯುವತಿ ಯುವಕರು ಹೆಚ್ಚಾಗಿ ಮೊಸಹೊಗಿದ್ದಾರೆ. ಪ್ರೀತಿಸಿದ ಹುಡುಗಿ ಬೇರೆಯವನ ಮದುವೆಯಾಗಿದ್ದಕ್ಕೆ ಪ್ರಿಯಕರ ದುಷ್ಕೃತ್ಯ ವೆಸಗಿದ್ದು ಖಾಸಗಿ ಫೋಟೋ ಅರಿಬಿಟ್ಟಿದ್ದಾನೆ. ಮದುವೆಯಾದ ಮಾರನೇ ದಿನವೇ ಯುವತಿ ಜೀವನ ಹಾಳಾಗಿದೆ. ಇಬ್ಬರು ಜೊತೆಗಿರುವ ಖಾಸಗಿ ಫೋಟೋ ಕಳಿಸಿ ಪ್ರಿಯಕರ ಜೀವನ ಹಾಳು ಮಾಡಿದ್ದ ಆರೋಪ ಕೇಳಿ ಬಂದಿದೆ.
ವರನ ಅಣ್ಣನ ಫೋನ್ ಗೆ ಫೋಟೋಗಳನ್ನು ಕಳುಹಿಸಲಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸೋಮವಾರಪೇಟೆ ನಿವಾಸಿ ಮುತ್ತುರಾಜ್ ಇಟಗಿ ಇಂತಹ ಕೃತ್ಯ ವೆಸಗಿದ್ದಾನೆ. ಆರು ವರ್ಷದಿಂದ ಮುತ್ತುರಾಜ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ.
ಆದರೆ ಯುವತಿ ಮನೆಯವರು ಬೇರೆಯವರ ಜೊತೆ ಮದುವೆ ಮಾಡಿದ್ದರು. ಫೆಬ್ರವರಿ 14ರಂದು ಯುವತಿ ಮದುವೆ ಅದ್ದೂರಿಯಾಗಿ ನಡೆದಿತ್ತು. ಮದುವೆಯಾದ ದಿನವೇ ವರಣ ಮನೆಗೆ ಆರೋಪಿ ಹೋಗಿದ್ದ ವರನ ಅಣ್ಣನ ಫೋನ್ ನಂಬರ್ ಪಡೆದುಕೊಂಡು ಫೋಟೋ ಕಳುಹಿಸಿದ್ದಾನೆ.
ಯುವತಿಯನ್ನು ಪತಿ ಮನೆಯವರು ಹಾಕಿದ್ದಾರೆ. ನ್ಯಾಯಕ್ಕಾಗಿ ಯುವತಿ ನಿರಂತರವಾಗಿ ಠಾಣೆಗೆ ಅಲೆದಾಡುತ್ತಿದ್ದಾರೆ. ದೂರು ದಾಖಲಿಸಿಕೊಳ್ಳಬೇಕಿದ್ದ ಪೊಲೀಸರು ಸ್ಪಂದಿಸುತ್ತಿಲ್ಲ ಎನ್ನಲಾಗುತ್ತಿದೆ. ಬೇಸತ್ತು ಯುವತಿ ಪ್ರಿಯಕರನ ಮನೆಯ ಮುಂದೆ ಧರಣಿ ಕುಳಿತಿದ್ದಾಳೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.