ಕಮಲದ ವಿರುದ್ಧ ಖಂಡ್ರೆ ಕಿಡಿ

ಕಮಲದ ವಿರುದ್ಧ ಖಂಡ್ರೆ ಕಿಡಿ

ಬೀದರ್, ಜ.11 : ಕಾಂಗ್ರೆಸ್ ಸರಕಾರ ಬಡವರಿಗೆ ಮನೆ ಕೊಟ್ಟರೆ ಬಿಜೆಪಿ ಅಂತಹ ಮನೆಗಳಿಗೆ ಹಣ ನೀಡದೆ ದ್ವೇಷದ ರಾಜಕೀಯ ಮಾಡುತ್ತಿದೆ. ಬಡವರ ಹೊಟ್ಟೆಯ ಮೇಲೆ ಒಡೆದು ಅವರ ಬದುಕನ್ನು ನಾಶ ಮಾಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸಾಲ ಸೋಲವನ್ನು ಮಾಡಿ ಮನೆ ಕಟ್ಟಿಕೊಂಡಿರುವ 3 ಲಕ್ಷ 60 ಸಾವಿರ ಫಲಾನುಭವಿಗಳು ಆತಂಕದಲ್ಲಿದ್ದಾರೆ. ಕೂಡಲೇ ಆ ಬಡವರ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos