ಏಕಾಂಗಿ ಹೋರಾಟ : ಎಚ್ ಡಿಡಿ

ಏಕಾಂಗಿ ಹೋರಾಟ : ಎಚ್ ಡಿಡಿ

ಉಡುಪಿ,ನ. 9 :  ಡಿ. 5ರಂದು ನಡೆಯಲ್ಲಿರುವ 15 ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು , ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಮುಂಬರು ಉಪಚುನಾವಣೆಯ ಕುರಿತು ಮಾತನಾಡಿದ ಅವರು,ಜೆಡಿಎಸ್ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಏಕಾಂಗಿಯಾಗಿ ಹೋರಾಟ ಮಾಡುತ್ತೇವೆ. ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ತೀರ್ಪು ಏನೇ ಬರಲಿ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ರೈತರ ಸಾಲಮನ್ನಾ ಪ್ರಸ್ತಾವ ಇಟ್ಟಾಗ ಕಾಂಗ್ರೆಸ್, ಬಿಜೆಪಿ ಅಪಹಾಸ್ಯ ಮಾಡಿದ್ದವು. ಜೆಡಿಎಸ್ ಅಧಿಕಾರಕ್ಕೆ ಬಂದರಲ್ವಾ ಅಂತ ಮೂದಲಿಕೆ ಮಾತಾಡಿದ್ದರು ಆದರೆ, ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ ಮಾತ್ರ . ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 72 ಸಾವಿರ ಮಂದಿಗೆ ಸಾಲಮನ್ನಾ ಲಾಭ ಆಗಿದೆ. ಈ ಎರಡು ಜಿಲ್ಲೆಗಳಿಗೆ ಸಾಲಮನ್ನಾಕ್ಕಾಗಿ 580 ಕೋಟಿ ರೂ. ವ್ಯಯಿಸಲಾಗಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos