ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 6 ಎಂ.ಎಲ್.ಎ.ಗಳು, 7 ಎಂ.ಎಲ್.ಸಿ.ಗಳು!

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 6 ಎಂ.ಎಲ್.ಎ.ಗಳು, 7 ಎಂ.ಎಲ್.ಸಿ.ಗಳು!

ಬೆಂಗಳೂರು, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಕೆ ಮಾಡದ 6 ಶಾಸಕರು ಮತ್ತು 7 ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಲೋಕಾಯುಕ್ತ ಸಂಸ್ಥೆ ಪ್ರಕಟ ಮಾಡಿದೆ. ಎಂ.ವೈ. ಪಾಟೀಲ್, ಬಿ. ನಾರಾಯಣ ರಾವ್, ಬಸವರಾಜ್ ದಡೇಸಗೂರ್, ಕೆ.ವೈ. ನಂಜೇಗೌಡ, ಎಂ. ಶ್ರೀನಿವಾಸ, ಕೆ.ಎಸ್. ಲಿಂಗೇಶ್, ಸಿ.ಎಂ. ಲಿಂಗಪ್ಪ, ಸಿ.ಎಂ. ಇಬ್ರಾಹಿಂ, ಆಯನೂರು ಮಂಜುನಾಥ್, ಆರ್. ಚೌಡರೆಡ್ಡಿ ತೂಪಲಿ ಮತ್ತು ಕಾಂತರಾಜು ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ರಿಜಿಸ್ಟ್ರಾರ್ ನಂಜುಡಸ್ವಾಮಿ ತಿಳಿಸಿದ್ದಾರೆ. ಪ್ರತಿವರ್ಷ ಜೂ.30 ರೊಳಗಾಗಿ ಆಸ್ತಿ ಘೋಷಣೆ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬೇಕು. 2017-18ರ ಸಾಲಿನಲ್ಲಿ 11 ಮಂದಿ ತಮ್ಮ ಆಸ್ತಿ ವಿವರನ್ನು ಸಲ್ಲಿಕೆ ಮಾಡಿಲ್ಲ. ಅದಕ್ಕಾಗಿ ದಿನಪತ್ರಿಕೆಗಳಲ್ಲಿ ಹೆಸರುಗಳನ್ನು ಪ್ರಕಟಿಸಿರುವುದಾಗಿ ನಂಜುಂಡಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos