ಕಾರ ಲಾಕ್ ಮಾಡಿಕೊಂಡು ಒಳ್ಳಗೆ ಮಲಗುವ ಮುನ್ನ ಎಚ್ಚರ

ಕಾರ ಲಾಕ್ ಮಾಡಿಕೊಂಡು ಒಳ್ಳಗೆ ಮಲಗುವ ಮುನ್ನ ಎಚ್ಚರ

ಧಾರವಾಡ, ಜ. 30: ಮಹಿಳೆಯೊಬ್ಬಳು ಕಾರಿನಲ್ಲಿ ಸಿಲುಕಿ ಹೊರಬರದೆ ಒದ್ದಾಡಿದ ಘಟನೆ ಧಾರವಾಡದ ಸಿಬಿಟಿ ಬಳಿ ಇರುವ ಕಾರ್ ಪಾರ್ಕಿಂಗ್ ನಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಸಿಬಿಟಿ ಬಳಿ ಕಾರ್ ಲಾಕ್ ಮಾಡಿಕೊಂಡು ಕಾರಿನಲ್ಲೆ ಮಲಗಿದ್ದಾಗ ಇಂದು ಬೆಳಿಗ್ಗೆ ಕಾರ ಲಾಕ್ ಒಪನ್ ಆಗದ ಕಾರಣ ಮಹಿಳೆ ಕಾರಿನಲ್ಲಿಯೇ ಒದ್ದಾಡಿದ್ದಾರೆ. ಕಾರ್ ಲಾಕ್ ಓಪನ್ ಆಗದ ಹಿನ್ನಲೆ, ಉಸಿರಾಡಲು ಗಾಳಿ ಸಿಗದೇ ಒದ್ದಾಡಿದ್ದಾರೆ. ತಕ್ಷಣ ಮಹಿಳೆ ಕಾರ್ ಒಳಗಡೆ ಒದ್ದಾಡಿದ್ದನ್ನ ನೋಡಿದ ಸ್ಥಳಿಯರು ಹಾಗೂ ಪೋಲಿಸರು, ಕಾರ ಗ್ಲಾಸ್ ಒಡೆದು ಮಹಿಳೆಯನ್ನ  ಹೊರತೆಗೆದಿದ್ದಾರೆ.

ಗೋಕಾಕ ತಾಲೂಕಿನ ಮಹಾದೇವಿ ಹಡಗಿನಹಾಳ ಸಿಲುಕಿಕೊಂಡ ಮಹಿಳೆಯಾಗಿದು. ಅವಳು ಯಾವ ಉದ್ದೇಶಕ್ಕಾಗಿ ಧಾರವಾಡಕ್ಕೆ ಬಂದಳು ಎಂದು ತಿಳಿದು ಬಂದಿಲ್ಲ. ಪೋಲಿಸರ ವಿಚಾರಣೆ ವೇಳೆ ಮಹಿಳೆ ಈ ತಡವಡಿಸುತ್ತಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸದ್ಯ ಮಹಾದೇವಿಯ‌ನ್ನ ಜಿಲ್ಲಾಸ್ಪತ್ರೆಗೆ ರವಾನಿಸಿದ ಪೋಲಿಸರು ಚಿಕಿತ್ಸೆ ಕೋಡಿ ಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos