ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ನ ಸ್ಟಾರ್ ನಟ ಡಾಲಿ ಧನಂಜಯ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ಇವರನ್ನ ಪ್ರೀತಿಯಿಂದ ನಟ ರಾಕ್ಷಸ ಎಂದು ಕರೆಯುತ್ತಾರೆ.
ನಟ ಡಾಲಿ ಧನಂಜಯ್ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ದಿನದಿಂದ ದಿನಕ್ಕೆ ಅವರ ಪ್ರಸಿದ್ಧಿ ಹೆಚ್ಚಾಗುತ್ತಿದೆ. ಕೆಲವು ಉತ್ಪನ್ನಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಸರ್ಕಾರದ ಲಿಡ್ಕರ್ ಬ್ರ್ಯಾಂಡ್ಗೂ ಅವರು ರಾಯಭಾರಿ ಆಗಿರುವುದು ವಿಶೇಷ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ವಿಧಾನ ಸೌಧದ ಮುಂಭಾಗದಲ್ಲಿ ಇಂದು ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಗಿದೆ. ಇದರಲ್ಲಿ ನಟ ಡಾಲಿ ಧನಂಜಯ್ ಕೂಡ ಭಾಗಿ ಆಗಿದ್ದಾರೆ. ಈ ವೇಳೆ ಲಿಡ್ಕರ್ ಬ್ರ್ಯಾಂಡ್ಗೆ ಧನಂಜಯ್ ಅವರನ್ನು ರಾಯಭಾರಿ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.