ಪರಿಹಾರ ಬೇಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಪರಿಹಾರ ಬೇಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಮಂಗಳೂರು, ಡಿ. 21 : ಪೊಲೀಸರ ಗುಂಡಿಗೆ ಬಲಿಯಾದ ನನ್ನ ಮಗನ ಸಾವಿಗೆ ಪರಿಹಾರ ಬೇಡ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಗಲಭೆಯಲ್ಲಿ ಮೃತಪಟ್ಟ ನೌಷದ್ ಅವರ ತಾಯಿ ಒತ್ತಾಯಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಹೋರಾಟದಲ್ಲಿ ಉಂಟಾದ ಗಲಭೆಯಲ್ಲಿ ನೌಷದ್ ಗುರುವಾರ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ನಿನ್ನೆ ಆತನ ಅಂತ್ಯ ಸಂಸ್ಕಾರ ನೆರವೇರಿದ್ದು, ಮೃತನ ಕುಟುಂಬಸ್ಥರನ್ನು ಸಿಎಂ ಯಡಿಯೂರಪ್ಪ ಇಂದು ಮಂಗಳೂರಿಗೆ ತೆರಳಿ ಭೇಟಿ ಮಾಡಿ ಸಮಾಧಾನಪಡಿಸಿದರು. ವೇಳೆ ಪೊಲೀಸರು ನನ್ನ ಮಗನನ್ನು ಕೊಂದರು ಎಂದು ಯಡಿಯೂರಪ್ಪ ಅವರ ಬಳಿ ಕಣ್ಣೀರಿಟ್ಟ ಮೃತ ನೌಷದ್ ಅವರ ತಾಯಿ ಮುಮ್ತಾಜ್, “ನನ್ನ ಮಗ ಬಂದರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ, ಪ್ರತಿದಿನ ಅದೇ ದಾರಿಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದ. ಆದರೆ, ಮೊನ್ನೆ ಪೊಲೀಸರು ನನ್ನ ಮಗನನ್ನು ಕೊಂದೆ ಬಿಟ್ಟರು. ಇದೆಂಥಾ ರಾಜಕೀಯ ಎಂದು ಕಣ್ಣೀರಿಟ್ಟ ಆಕೆ, ನನ್ನ ಮಗನ ಸಾವಿಗೆ ಪರಿಹಾರವೇನೂ ಬೇಡ ದಯವಿಟ್ಟು ನನ್ನ ಮಗನನ್ನು ಕೊಂದವರಿಗೆ ತಕ್ಕ ಶಿಕ್ಷೆ ನೀಡಿ” ಎಂದು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos