ಬೆಂಗಳೂರು: ಬೆಂಗಳೂರಿನಲ್ಲಿ ಚಿರತೆಯ ಹಾವಳಿ ಚಿರತೆ ಭೀತಿ ಮುಗಿತಾ ಇದ್ದಂತೆ. ಈಗ ಕನಕಪುರದಲ್ಲಿ ಚಿರತೆಗಳ ಕಾಟ ಮತ್ತು ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕನಕಪುರ ತಾಲೂಕಿನಲ್ಲಿ ಚಿರತೆ ಹಾವಳಿ ಇಡುತ್ತಿದ್ದು. ಫಾರ್ಮ್ ಹೌಸ್ ನಲ್ಲಿ ಚಿರತೆ ಓಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಮುನಿಯಪ್ಪ ಎಂಬವರ ಕಾಂಪೋಟನ್ನ ಒಳಗೆ ಚಿರತೆ ನುಗ್ಗಿ ಎರಡು ಕೋಳಿಗಳನ್ನು ತಿಂದಿದೆ. ಸಾಕಷ್ಟು ದಿನಗಳಿಂದ ಕನಕಪುರ ತಾಲೂಕಿನಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು. ಅರಣ್ಯ ಇಲಾಖೆಯ ಅಧಿಕಾರಿಗಳು ದೂರು ಕೊಟ್ಟರು ಸಹ ಇಲ್ಲಿವರೆಗೂ ಸ್ಥಳಕ್ಕೆ ಬಂದಿಲ್ಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.