ಇಲಾಖಾವಾರು ಮಾಹಿತಿ ಪಡೆದ ಶಾಸಕರು

ಇಲಾಖಾವಾರು ಮಾಹಿತಿ ಪಡೆದ ಶಾಸಕರು

ಪಾವಗಡ:ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯಿತಿ ಕಛೇರಿಯಲ್ಲಿ  ನಡೆಯಿತು. ಈ ವೇಳೆ ಸಭೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉಧ್ಯೋಗ ಖಾತರಿ, ಕುಡಿಯುವ ನೀರು, ವಸತಿ, ಸ್ವಚ್ಚ ಅಭಿಯಾನ, ಎಸ್.ಸಿ.ಪಿ, ಮತ್ತು ಟಿಎಸ್.ಪಿ ಯೋಜನೆ ಕಾಮಗಾರಿಗಳು ಸೇರಿದಂತೆ ವಿವಿಧ ಕೇಂದ್ರ  ಮತ್ತು ರಾಜ್ಯ ಸರ್ಕಾರದ ಪುರಸ್ಕೃತ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.                                                                                                                  ತಾಲ್ಲೂಕಿನಾಂದ್ಯಂತ ಕೆಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವನೀರಿನ ಅಭಾವ,ಉಂಟಾಗಿದ್ದು, ಅದನ್ನು ನೀಗಿಸಲು ಸಂಭಂದ ಪಟ್ಟ ಇಲಾಖೆಯವರು ಮುಂಜಾಗ್ರತೆ ವಹಿಸಬೇಕು,  ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ನಿರ್ಮಿತ ಕೇಂದ್ರದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ೨೦೧೭-೧೮ನೇ ಸಾಲಿನ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಎಚ್ಚರಿಕೆ ನೀಡಿದರು.                                                                                                                           ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಸಾಸಲುಕುಂಟೆ, ಲಿಂಗದಹಳ್ಳಿಗಳಿಗೆ ಬಸ್ ಸಂಚರಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಹೇಳಿದರು. ತಾಲ್ಲೂಕಿನ ಎಲ್ಲಾ ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಮಾಳಮ್ಮ, ಉಪಾಧ್ಯಕ್ಷರಾದ ಐ ಜಿ ನಾಗರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಪಾಪಣ್ಣ, ತಾಪಂ ಸದಸ್ಯ ಹನುಮಂತರಾಯಪ್ಪ, ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ ಹಾಜರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos