ಕೋಟಿ ಕಾಮಗಾರಿಗೆ ಶಾಸಕ ಗುದ್ದಲಿ ಪೂಜೆ

ಕೋಟಿ ಕಾಮಗಾರಿಗೆ ಶಾಸಕ ಗುದ್ದಲಿ ಪೂಜೆ

ಹೊಸಕೋಟೆ:ತಾಲ್ಲೂಕು ಕಸಬಾ ಹೋಬಳಿ ಸಮೇತನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊರಳೂರು ಗ್ರಾಮದಲ್ಲಿ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಒಂದು ಕೋಟಿ, ಕ್ರಿಯಾ ಯೋಜನೆ ಅನುದಾನ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಗುದ್ದಲಿ ಪ್ರಜೆಯನ್ನು ಇಂದು ನೆರವೇರಿಸಿದರು.
ನಂತರ ಮಾತನಾಡಿ ಶಾಸಕರು ಗ್ರಾಮಕ್ಕೆ ಬೇಕಾದ ಸಮುದಾಯ ಭವನ, ಜಿಮ್ ಕಟ್ಟಡ, ಘನತ್ಯಾಜ ವಿಲೇವಾರಿ ಘಟಕ, ಸೋಲಾರ್ ಬೀದಿ ದೀಪಗಳು, ಮೋರಿಗಳು, ಚರಂಡಿಗಳು, ಸಾರ್ವಜನಕ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಮಹಾತ್ಮ ಗಾಂಧಿ ಪ್ರತಿ ಗ್ರಾಮಸ್ವಾರಾಜ್ಯವಾಗಿರಬೇಕೆಂದರು.
ಸಂಪಲ್ಮೂನಗಳನ್ನು ಬಳಸಿಕೊಂಡು ಅಲ್ಲೇ ಉತ್ಪನ್ನ ಮಾಡುವ ಕನಸನ್ನು ಗಾಂದಿಜೀ ಹೊಂದಿದ್ದರು. ಅದೇ ರೀತಿ ಮಂಜುಶ್ರೀ ಲೇಔಟ್‌ನಲ್ಲಿ ಕೊಳವೆ ಭಾವಿ ಕೊರೆಸಿ ಪ್ರತಿ ಮನೆಗೆ ಪಂಚಾಯ್ತಿವತಿಂದ ನೀರನ್ನು ಕೊಡುವ ಕೆಲಸ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕಸಬಾ ಹೋಬಳಿ ಮತ್ತು ಅನುಗೊಂಡನಹಳ್ಳಿ ಹೋಬಳಿಗಳಲ್ಲಿಯೂ ನಡೆಯುತ್ತಿವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos